ನವದೆಹಲಿ: ಸಿಂಗಾಪುರದಲ್ಲಿ ಜರುಗಿದ ಸಮಿತ್ಗಳಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಇಂಡೋ-ಪೆಸಿಫಿಕ್ ಭಾಗದ ಉತ್ತಮ ಕನೆಕ್ಟಿವಿಟಿ, ವ್ಯಾಪಾರ ವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು.
ಅಸಿಯಾನ್-ಇಂಡಿಯಾ ಸಮಿತ್, ಈಸ್ಟ್ ಏಷ್ಯಾ ಸಮಿತ್ಗಳಲ್ಲಿ ಮೋದಿ ಭಾಗವಹಿಸಿದ್ದು, ಎರಡಲ್ಲೂ ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶ, ವ್ಯಾಪಾರ ಸಹಕಾರ, ಸಮುದ್ರ ಸಹಕಾರದ ಆಶಯಗಳಿಗೆ ಅವರು ಪ್ರಮುಖವಾಗಿ ಒತ್ತು ನೀಡಿದ್ದಾರೆ.
ಅಸಿಯಾನ್ ನಾಯಕರೊಂದಿಗಿನ ಮಾತುಕತೆಯ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ‘ಅದ್ಭುತ ಭವಿಸ್ಯದ ಅನ್ವೇಷಣೆಯಲ್ಲಿ ಹಳೆ ಬಂಧಗಳು’ ಎಂದು ವಿಶ್ಲೇಷಿಸಿದ್ದಾರೆ.
‘ಅಸಿಯಾನ್ ನಾಯಕರೊಂದಿಗೆ ಬಾಂಧವ್ಯ ಬಲಿಷ್ಠವಾಗಿದ್ದು, ಶಾಂತಿ ಮತ್ತು ಸಮೃದ್ಧಿಯ ಜಗತ್ತು ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ’ ಎಂದಿದ್ದರು.
ಒಟ್ಟಿನಲ್ಲಿ ಎರಡು ದಿನಗಳ ಕಾಲ ಮೋದಿ ಹಮ್ಮಿಕೊಂಡಿದ್ದ ಸಿಂಗಾಪುರ ಪ್ರವಾಸ ಫಲದಾಯಕವಾಗಿದ್ದು, ಭಾರತವನ್ನು ವಿಶ್ವ ವೇದಿಕೆಯಲ್ಲಿ ಮತ್ತಷ್ಟು ಬಲಿಷ್ಠವನ್ನಾಗಿಸಿದೆ.
source: hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.