ಉಧಮ್ಪುರ: ಭಯೋತ್ಪಾದನೆಯಿಂದ ತೀವ್ರವಾಗಿ ಬಾಧಿತಗೊಂಡಿರುವ ಜಮ್ಮು ಕಾಶ್ಮೀರದ ಬಡ ವಿದ್ಯಾರ್ಥಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸುವ ಸಲುವಾಗಿ ಭಾರತೀಯ ಸೇನೆಯ ನಾರ್ದನ್ ಕಮಾಂಡ್ ಅವರೊಂದಿಗೆ ‘ಮಕ್ಕಳ ದಿನಾಚರಣೆ’ಯನ್ನು ಸಂಭ್ರಮಿಸಿದೆ.
ನಾರ್ದನ್ ಕಮಾಂಡ್ನ ಆರ್ಮಿ ಕಮಾಂಡರ್ ಲೆ.ಜ.ರಣ್ಬೀರ್ ಸಿಂಗ್ ಅವರು, ತಮ್ಮ ನಿವಾಸದಲ್ಲಿ ಭಯೋತ್ಪಾದನೆಯಿಂದ ಪೀಡಿತರಾದ, ಉಧಮ್ಪುರ ಆರ್ಮಿ ಸ್ಕೂಲ್ನಲ್ಲಿ ಕಲಿಯುತ್ತಿರುವ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ಮಕ್ಕಳು ಆರ್ಥಿಕವಾಗಿ ತೀವ್ರ ಹಿಂದುಳಿದವರಾಗಿದ್ದು, ಭಯೋತ್ಪಾದನೆಯ ಕರಿನೆರಳು ಇವರನ್ನು ಜರ್ಜರಿತಗೊಳಿಸಿದೆ.
‘ಆಪರೇಶನ್ ಸದ್ಭಾವನ್’ ಕಾರ್ಯಕ್ರಮದ ಭಾಗವಾಗಿ ನಾರ್ದನ್ ಕಮಾಂಡ್ ಈ ಎಲ್ಲಾ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಅವರಿಗೆ ಶಿಕ್ಷಣ, ವಸತಿ, ವಸ್ತ್ರಗಳನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ, ಈ ಕಾರ್ಯಕ್ರಮದಡಿ ಬಡ ಜನರಿಗೆ ಮೂಲಸೌಕರ್ಯ, ಶಿಕ್ಷಣ, ವೈದ್ಯಕೀಯ, ಉದ್ಯೋಗ ತರಬೇತಿಗಳನ್ನು ಕಲ್ಪಿಸಿಕೊಡುತ್ತಿದೆ.
ಸೈನಿಕರು ಮತ್ತು ಕಣಿವೆ ಜನರ ನಡುವಣ ಭರವಸೆ ಮತ್ತು ಗೌರವದ ಬಾಂಧವ್ಯದ ಧ್ಯೋತಕವೇ ‘ಆಪರೇಶನ್ ಸದ್ಭಾವನ್’. ಎರಡು ದಶಕಗಳಿಂದ ಇದರ ಮೂಲಕ ಸೇವಾಕಾರ್ಯಗಳು ನಡೆಯುತ್ತಿವೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.