ನವದೆಹಲಿ: ಶ್ರೀರಾಮನಿಗೆ ಸಂಬಂಧಿಸಿದ ಪವಿತ್ರ ಕ್ಷೇತ್ರಗಳ ದರ್ಶನ ಪಡೆಯಲು ಹವಣಿಸುತ್ತಿರುವ ಭಕ್ತಾದಿಗಳಿಗೆ ರೈಲ್ವೇ ಸಚಿವಾಲಯ ಇಂದಿನಿಂದ ಸುವರ್ಣಾವಕಾಶವನ್ನು ಕಲ್ಪಿಸಿದೆ. ರಾಮನ ಪವಿತ್ರ ಕ್ಷೇತ್ರಗಳ ದರ್ಶನಕ್ಕಾಗಿ ಶ್ರೀರಾಮಾಯಣ ಎಕ್ಸ್ಪ್ರೆಸ್ಗೆ ಇಂದಿನಿಂದ ಚಾಲನೆ ಸಿಗಲಿದೆ.
ದೇಶದ ಯಾತ್ರಾ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ರೈಲ್ವೇ ಸಚಿವಾಲಯವು ವಿಶೇಷ ಟೂರಿಸ್ಟ್ ಟ್ರೈನ್-ಶ್ರೀ ರಾಮಾಯಣ ಎಕ್ಸ್ಪ್ರೆಸ್ನ್ನು ಇಂದಿನಿಂದ ಆರಂಭಿಸಲಿದೆ. ಕೇವಲ 16 ದಿನಗಳಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿರುವ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ತಾಣಗಳಿಗೂ ಈ ಎಕ್ಸ್ಪ್ರೆಸ್ ಪ್ರಯಾಣಿಕರನ್ನು ಕರೆದೊಯ್ಯಲಿದೆ.
ಈ ಯಾತ್ರೆಗೆ ‘ಶ್ರೀರಾಮಾಯಣ ಯಾತ್ರಾ’ ಎಂದು ಹೆಸರಿಡಲಾಗಿದ್ದು, ಭಾರತ ಮತ್ತು ಶ್ರೀಲಂಕಾದಲ್ಲಿ ಎರಡು ಟ್ರಾವೆಲ್ ಘಟಕಗಳನ್ನು ಹೊಮದಲಿದೆ, ದೆಹಲಿಯಿಂದ ಹೊರಟು ಮೊದಲು ಅಯೋಧ್ಯಾಗೆ ತೆರಳಲಿದೆ. ಅಲ್ಲಿಂದ ಹುನುಮಾನ್ ಗಿರಿ, ರಾಮ್ಕೋಟ್, ಕನಕ ಭವನ್ ದೇಗುಲಕ್ಕೆ ತೆರಳಲಿದೆ.
ನಂದಿಗ್ರಾಮ, ಸೀತಾಮರ್ಹಿ, ಜನಕಪುರ್, ವಾರಣಾಸಿ, ಪ್ರಯಾಗ್, ಶ್ರೀಗ್ವೆರ್ಪುರ್, ಚಿತ್ರಕೂಟ್, ನಾಸಿಕ್, ಹಂಪಿ, ರಾಮೇಶ್ವರಂಗೆ ಈ ರೈಲಿನಲ್ಲಿ ಕೂತು ಪ್ರಯಾಣಿಸಬಹುದು.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.