ನವದೆಹಲಿ: ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಫೇಸ್ಬುಕ್ ಒಡೆತನದ ವಾಟ್ಸಾಪ್, ಭಾರತ ಸೇರಿದಂತೆ ವಿಶ್ವದಾದ್ಯಂತದ ತಜ್ಞರನ್ನು ಒಳಗೊಂಡ 20 ಸಂಶೋಧನಾ ತಂಡಗಳನ್ನು ರಚಿಸಿದೆ. ಈ ತಂಡ ತಪ್ಪು ಮಾಹಿತಿ ಹರಡುವಿಕೆ ಮುಂತಾದ ದುಷ್ಪಾರಿಣಾಮಗಳ ತಡೆಗೆ ಕಾರ್ಯಪ್ರವೃತ್ತವಾಗಲಿದೆ.
‘ವಾಟ್ಸಾಪ್ ವೆಜಿಲೆಂಟ್ಸ್? ವಾಟ್ಸಾಪ್ ಮೆಸೇಜಸ್ ಆಂಡ್ ಮಾಬ್ ವೈಲೆನ್ಸ್ ಇನ್ ಇಂಡಿಯಾ’ ಎಂಬ ವಿಷಯದ ಬಗ್ಗೆ ಪೇಪರ್ ಮಂಡನೆಗೊಳಿಸಲು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆಂಡ್ ಪೊಲಿಟಿಕಲ್ ಸೈನ್ಸ್ನ ಶಕುಂತಲ ಬಾನಾಜಿ, ರಮನಾಥ್ ಭಟ್, ಬೆಂಗಳೂರು ಮೂಲದ ಮೀಡಿಯಾ ಆಂಡ್ ಆರ್ಟ್ಸ್ ಕಲೆಕ್ಟಿವ್ ‘ಮರಾ’ದ ಅನುಷಿ ಅಗರ್ವಾಲ್, ನಿಹಾಲ್ ಪಸ್ಸಾನ್ಹ ಅವರನ್ನು ಆಯ್ಕೆ ಮಾಡಲಾಗಿದೆ.
ಇದುವರೆಗೆ ಸುಮಾರು 30 ಮಂದಿಯನ್ನು ಬಲಿ ತೆಗೆದುಕೊಂಡಿರುವ ‘ವಾಟ್ಸಾಪ್ ಲಿಚಿಂಗ್’ ಬಗ್ಗೆ ವಾಟ್ಸಾಪ್ ಬಳಕೆದಾರರ ಅರಿವು ಎಷ್ಟರ ಮಟ್ಟಿಗೆ ಇದೆ ಮತ್ತು ಇಂತಹ ಲಿಚಿಂಗ್ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇವರು ಪ್ರಸ್ತುತಪಡಿಸುವ ಪೇಪರ್ನಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ.
ನಕಲಿ, ಸುಳ್ಳು, ಪ್ರಚೋದನಾಕಾರಿ ಸುದ್ದಿಗಳು ಹರಡುವುದನ್ನು ತಡೆಗಟ್ಟುವಂತೆ ವಾಟ್ಸಾಪ್ಗೆ ಭಾರತ ಸರ್ಕಾರ ಸೂಚನೆಯನ್ನು ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಾಟ್ಸಾಪ್ ಈಗಾಗಲೇ ಒಂದಿಷ್ಟು ಅಂಶಗಳನ್ನು ಅನುಷ್ಠಾನಗೊಳಿಸಿದ್ದು, ಇನ್ನಷ್ಟು ಕ್ರಮಗಳು ಈ ನಿಟ್ಟಿನಲ್ಲಿ ಅತ್ಯವಶ್ಯಕವಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.