ರಾಯ್ಪುರ: ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜಸ್ಥಾನದಲ್ಲಿ ಚುನಾವಣಾ ಅಧಿಕಾರಿಗಳು ‘ಸಯನ ಕಾಕಾ’ ಎಂಬ ಕಾರ್ಟೂನ್ ಸಿರೀಸ್ನ್ನು ರಚಿಸಿದ್ದಾರೆ.
ರಾಜಸ್ಥಾನಿ ಭಾಷೆಯಲ್ಲಿ ‘ಸಯನ ಕಾಕಾ’ ಎಂದರೆ ‘ಬುದ್ಧಿವಂತ ಚಿಕ್ಕಪ್ಪ’ ಎಂದರ್ಥ. ಈ ಕ್ಯಾರೆಕ್ಟರ್ನ್ನು ಬಳಸಿ ಮತದಾರರಿಗೆ ಮತದಾನದ ಬಗ್ಗೆ ಶಿಕ್ಷಣ ನೀಡಲು, ಚುನಾವಣೆ ಪ್ರಕ್ರಿಯೆಯಲ್ಲಿ ಜನರನ್ನು ಹೆಚ್ಚು ಭಾಗವಹಿಸುವಂತೆ ಮಾಡಲು ಪ್ರೇರೇಪಿಸಲಾಗುತ್ತಿದೆ.
‘ಸಯನ ಕಾಕಾ’ವನ್ನು ಮತದಾನದ ಅರಿವಿಗಾಗಿ ಬಳಸುವ ಯೋಚನೆ ಬುಂಡಿ ಜಿಲ್ಲೆಯ ಕಲೆಕ್ಟರ್ ಮಹೇಶ್ ಚಂದ್ ಶರ್ಮಾ ಅವರ ಬ್ರೈನ್ ಚೈಲ್ಡ್ ಆಗಿದ್ದು, ಸುನೀಲ್ ಜಂಗಿದ್ ಎಂಬ ಕಾರ್ಟೂನಿಸ್ಟ್ ಇದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಈ ಕಾರ್ಟೂನ್ನಲ್ಲಿ ಸಯನ ಕಾಕಾ ಜನರಿಗೆ ಮತದಾನ ಮಾಡುವ ಪ್ರಯೋಜನೆಗಳನ್ನು ಅರ್ಥವತ್ತಾಗಿ ವಿವರಿಸುತ್ತಾನೆ.
ಜನರನ್ನು ಮತದಾನದತ್ತ ಸೆಳೆಯಲು ಚುನಾವಣಾ ಅಧಿಕಾರಿಗಳು ಈ ತಂತ್ರಗಳನ್ನು ಬಳಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
source: Hindustan times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.