ನವದೆಹಲಿ: ಭಾರತದ ಮೊದಲ ಪರಮಾಣು ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಹಂತ್ ತನ್ನ ಮೊದಲ “ಪರಮಾಣು ಗಸ್ತು”ನ್ನು ಪೂರ್ಣಗೊಳಿಸಿದ್ದು, ಸೋಮವಾರ ಅದರಲ್ಲಿನ ಸಿಬ್ಬಂದಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸನ್ಮಾನ ಮಾಡಿದರು.
ಬಳಿಕ ಮಾತನಾಡಿದ ಅವರು, ದೇಶದ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಐಎನ್ಎಸ್ ಅರಿಹಂತ್ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ, ನಮ್ಮ ಇತಿಹಾಸದಲ್ಲಿ ಇದು ಯಾವಾಗಲೂ ನೆನಪಿನಲ್ಲಿರುತ್ತದೆ” ಎಂದರು.
6,000 ಟನ್ಗಳಷ್ಟು ಭಾರದ ಐಎನ್ಎಸ್ ವರ್ಗೀಕೃತ ಕಾರ್ಯಕ್ರಮದಡಿ ಮೂರು ದಶಕಗಳವರೆಗೆ ಅಭಿವೃದ್ಧಿಯಡಿಯಲ್ಲಿತ್ತು, ಇದು ಪ್ರಧಾನಿ ಮೋದಿ ನೇತೃತ್ವದ ಪರಮಾಣು ಕಮಾಂಡ್ ಪ್ರಾಧಿಕಾರದ ನೇರ ನಿಯಂತ್ರಣದಲ್ಲಿದೆ. “ಪರೀಕ್ಷಾರ್ಥ ಗಸ್ತು”ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಐಎನ್ಎಸ್ ಅರಿಹಂತ್ನ್ನು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಜಲಾಂತಗಾರ್ಮಿ ಕ್ಷಿಪಣಿ ವಿತರಣಾ ವೇದಿಕೆ ಎಂದು ಪರಿಗಣಿಸಬಹುದು.
“ಈಗಿನ ಯುಗದಲ್ಲಿ, ವಿಶ್ವಾಸಾರ್ಹ ಪರಮಾಣು ನಿರೋಧಕತೆ ಅತ್ಯಗತ್ಯವಾಗಿದೆ. ಐಎನ್ಎಸ್ ಅರಿಯಂತ್ ಯಶಸ್ಸು ಪರಮಾಣು ಬ್ಲ್ಯಾಕ್ಮೇಲ್ನಲ್ಲಿ ತೊಡಗಿರುವವರಿಗೆ ತಕ್ಕ ಪ್ರತಿಕ್ರಿಯೆ ನೀಡಿದೆ” ಎಂದು ಮೋದಿ ಹೇಳಿದರು.
’ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಕಾರ್ಯತಂತ್ರದ ಆಸ್ತಿಯಾಗಿದ್ದು, ಸಮುದ್ರದಾಚೆಯಿಂದಲೂ ಒಳ ನುಗ್ಗುವ ಕ್ಷಿಪಣಿಗಳನ್ನು ತಡೆಹಿಡಿಯಬಲ್ಲದು. ಇದು ಶತ್ರು ರಾಷ್ಟ್ರದ ಕರಾವಳಿಯ ತೀರದ ಸಮೀಪ ನುಗ್ಗುವ ಸಾಮರ್ಥ್ಯವನ್ನೂ ಹೊಂದಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.