ಅಗರ್ತಾಲ: ಜೀವನೋಪಾಯಕ್ಕಾಗಿ ಯುವಕರು ಗೋಸಾಗಾಣಿಕೆ ಮಾಡಬೇಕು ಎಂದು ಸಲಹೆ ನೀಡಿರುವ ತ್ರಿಪುರಾ ಸಿಎಂ ಬಿಪ್ಲವ್ ದೇವ್ ಅವರು, ಇದೀಗ ತಮ್ಮ ರಾಜ್ಯದ 5 ಸಾವಿರ ಕುಟುಂಬಗಳಿಗೆ ಗೋವುಗಳನ್ನು ನೀಡಲು ನಿರ್ಧರಿಸಿದ್ದಾರೆ.
ತನ್ನ ಅಧಿಕೃತ ನಿವಾಸದಲ್ಲೂ ಗೋವನ್ನು ಸಾಕಿರುವುದಾಗಿ ಘೋಷಣೆ ಮಾಡಿದ ಅವರು, ಇದರಿಂದ ತಮ್ಮ ಕುಟುಂಬ ಹಾಲಿನ ಬೇಡಿಕೆ ಈಡೇರಲಿದೆ. ಅಲ್ಲದೇ ತ್ರಿಪುರಾದ ಇತರ ಜನರಿಗೂ ಇದರಿಂದ ಸ್ಫೂರ್ತಿ ಸಿಗಲಿದೆ. ಈ ಮೂಲಕ ಅಪೌಷ್ಠಿಕತೆಯೂ ನಿವಾರಣೆಯಾಗಲಿದೆ ಎಂದಿದ್ದಾರೆ.
ಶೀಘ್ರದಲ್ಲೇ 5 ಸಾವಿರ ಕುಟುಂಬಗಳಿಗೆ ಗೋವುಗಳನ್ನು ಹಂಚುವ ಯೋಜನೆಯನ್ನು ನಾನು ಜಾರಿಗೆ ತರುತ್ತೇನೆ. ದೊಡ್ಡ ದೊಡ್ಡ ಉದ್ಯಮ ಆರಂಭಿಸಲು ನನ್ನ ವಿರೋಧವಿಲ್ಲ. ಆದರೆ 2 ಸಾವಿರ ಜನರಿಗೆ ಉದ್ಯೋಗ ನೀಡಲು 10 ಸಾವಿರ ಕೋಟಿ ಖರ್ಚು ಮಾಡಬೇಕಾಗುತ್ತದೆ. ಆದರೆ ಗೋವುಗಳು 6 ತಿಂಗಳಲ್ಲಿ ಕುಟುಂಬಗಳಿಗೆ ಆದಾಯ ತಂದುಕೊಡಲಿದೆ ಎಂದಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.