ನವದೆಹಲಿ: ಇಂಡೋ-ಪೆಸಿಫಿಕ್ ಭಾಗದಲ್ಲಿ ಭಾರತ ಭದ್ರತೆಯನ್ನು ಕಾಯ್ದುಕೊಳ್ಳಲಿದೆ ಮತ್ತು ಎಲ್ಲಾ ಶಕ್ತಿಗಳೊಂದಿಗೂ ಜೊತೆಸೇರಿ ಕಾರ್ಯನಿರ್ವಹಿಸಿ ಆ ಭಾಗದ ಶಾಂತಿಗೆ ಶ್ರಮಿಸಲಿದೆ ಎಂದು ಸೇನಾಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕಾರ್ಯತಂತ್ರ ಶಕ್ತಿಗಳ ಸಮತೋಲನ ಇಂಡೋ-ಪೆಸಿಫಿಕ್ ಭಾಗದಲ್ಲಿ ಕ್ರಿಯಾಶೀಲವಾಗಿದ್ದು, ಭವಿಷ್ಯದಲ್ಲೂ ಹೀಗೆಯೇ ಇರಲಿದೆ ಎಂದಿದ್ದಾರೆ.
‘ಬಾಹ್ಯರೇಖೆ ಆಶಯಗಳು ಮತ್ತು ಸಿದ್ಧಾಂತಗಳನ್ನು ಬೇರೆಯವರ ಮೇಲೆ ಹೇರಿಕೆ ಮಾಡದಿರುವುದು ನಮ್ಮ ಅತೀಮುಖ್ಯ ಭದ್ರತಾ ನಿಯಮ’ವಾಗಿದೆ ಎಂದಿದ್ದಾರೆ.
‘ಹಿಂದೂ ಮಹಾಸಾಗರ ಇಂಡೋ-ಪೆಸಿಫಿಕ್ ಭಾಗದ ರಾಷ್ಟ್ರಗಳನ್ನು ಆರ್ಥಿಕವಾಗಿ, ಸಾಂಸ್ಕೃತಿವಾಗಿ ಜೋಡಿಸಿದೆ. ಜಪಾನ್ ನಗರವೊಂದಕ್ಕೆ ಲಕ್ಷ್ಮೀಯ ಹೆಸರು ಇರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಬುದ್ಧಿಸಂ ಚೀನಾ ಮಾತ್ರವಲ್ಲದೇ ಜಪಾನ್, ಭಾರತ, ಕೊರಿಯಾದುದಕ್ಕೂ ವ್ಯಾಪಿಸಿದೆ’ ಎಂದಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.