ನವದೆಹಲಿ: ಛತ್ತೀಸ್ಗಢದ ದಂತೇವಾಡ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ ಇಬ್ಬರು ಪೊಲೀಸರು ಮತ್ತು ಒರ್ವ ದೂರದರ್ಶನ ಕ್ಯಾಮೆರಾಮೆನ್ ಮಂಗಳವಾರ ಬಲಿಯಾಗಿದ್ದಾರೆ. ಇದೀಗ ಸಾಯುವುದಕ್ಕೂ ಮುನ್ನ ಕ್ಯಾಮೆರಾಮನ್ ಅಚ್ಯುತಾನಂದ್ ಸಾಹು ಅನುಭವಿಸಿದ ನರಕಯಾತನೆಯ ವೀಡಿಯೋ ವೈರಲ್ ಆಗಿದೆ.
ನಕ್ಸಲ್ ದಾಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಸಾಹು ಅವರು, ತಮ್ಮ ತಾಯಿಗೆ ಸಂದೇಶ ನೀಡುವ ಉದ್ದೇಶದೊಂದಿಗೆ ವಿಡಿಯೋ ಮಾಡಿದ್ದಾರೆ. ಅವರ ಸಹೋದ್ಯೋಗಿ ಮುಕುಟ್ ಶರ್ಮಾ ಅವರ ಮೊಬೈಲ್ನಲ್ಲಿ ವೀಡಿಯೋ ರೆಕಾರ್ಡ್ ಮಾಡಲಾಗಿದೆ.
‘ಇಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ, ಸಾವು ನನ್ನ ಮುಂದೆ ಇದೆ. ಬದುಕಿ ಬರುತ್ತೇನೆಂಬ ನಂಬಿಕೆ ನನಗಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ನನ್ನ ಜೀವ ಹೋಗಬಹುದು’ ಎಂದು ತಾಯಿಗೆ ಅವರು ಈ ವೀಡಿಯೋದಲ್ಲಿ ಸಂದೇಶ ನೀಡಿದ್ದಾರೆ.
ಮುಕುಟ್ ಶರ್ಮಾ ಅವರೂ ನಕ್ಸಲ್ ದಾಳಿಯಿಂದ ತುಸುವೇ ಅಂತರದಲ್ಲಿ ಪಾರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಸೈನಿಕರು ಬಂದು ನನ್ನನ್ನು ಕಾಪಾಡಿದ ಹಿನ್ನಲೆಯಲ್ಲಿ ಬದುಕುಳಿದಿದ್ದೇನೆ ಎಂದಿದ್ದಾರೆ.
ದಂತೇವಾಡದ ನಿಲಮಯ ಗ್ರಾಮದ 450 ಕಿಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ನ.12ರಂದು ಚುನಾವಣೆ ನಡೆಯಲಿದ್ದು, ಈ ನಿಮಿತ್ತ ಅವರು ಇಬ್ಬರು ಪೊಲೀಸರೂ ಹತರಾಗಿದ್ದಾರೆ. ಸಾಹು ಮತ್ತು ಅವರ ಸ್ನೇಹಿತ ಚುನಾವಣಾ ವರದಿ ಸಿದ್ಧಪಡಿಸುತ್ತಿದ್ದರು. ನಕ್ಸಲರು ಇಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಅಮಾಯಕರನ್ನು ಅಮಾನುಷವಾಗಿ ಹತ್ಯೆ ಮಾಡುವ ಮೂಲಕ ನಕ್ಸಲರು ತಾವೆಂತ ಕ್ರೂರಿಗಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
As the Police and Doordarshan team came under attack from Naxals, DD assistant cameraman recorded a message for his mother. pic.twitter.com/DwpjsT3klt
— Rahul Pandita (@rahulpandita) October 31, 2018
source: ABPLIVE
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.