ವಿಶ್ವದ ಅತೀದೊಡ್ಡ ಪ್ರತಿಮೆ ನಾಳೆ ಗುಜರಾತ್ನಲ್ಲಿ ಲೋಕಾರ್ಪಣೆಯಾಗುತ್ತಿದೆ. ದೇಶದ ಏಕೀಕರಣದ ರುವಾರಿ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಗೌರವಾರ್ಥ ನಿರ್ಮಾಣವಾಗಿರುವ 182 ಅಡಿ ಎತ್ತರದ ‘ಏಕತಾ ಪ್ರತಿಮೆ’ ಹಿಂದೆ ಹಲವಾರು ಶಿಲ್ಪಿಗಳ, ಕೂಲಿ ಕಾರ್ಮಿಕರ ಪರಿಶ್ರಮವಿದೆ. ಬಹುಮುಖ್ಯವಾಗಿ 93 ವರ್ಷದ ಶಿಲ್ಪಿ ರಾಮ್ ವಾಂಜಿ ಸುತರ್ ಎಂಬುವವರು ಈ ಪ್ರತಿಮೆಯ ಹಿಂದಿರುವ ನಿರ್ಮಾತೃವಾಗಿದ್ದಾರೆ.
ತಮ್ಮ 7 ದಶಕಗಳ ವೃತ್ತಿ ಜೀವನದಲ್ಲಿ 8 ಸಾವಿರ ಶಿಲ್ಪಗಳನ್ನು ನಿರ್ಮಾಣ ಮಾಡಿರುವ ವಾಂಜಿ, ನರ್ಮದಾ ನದಿ ತೀರದಲ್ಲಿ ವಿಶ್ವದ ಅತೀದೊಡ್ಡ ಪ್ರತಿಮೆಯ ಹಿಂದಿನ ಬಹುಮುಖ್ಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರ ಕೈಚಳಕದಲ್ಲಿ ಮೂಡಿರುವ ಸರ್ದಾರ್ ಪ್ರತಿಮೆ ಅಮೆರಿಕಾದ ಸ್ಟ್ಯಾಚು ಆಫ್ ಲಿಬರ್ಟಿಗಿಂತ 2 ಪಟ್ಟು ಎತ್ತರವಿದೆ.
ಪದ್ಮಶ್ರೀ, ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿರುವ ವಾಂಜಿ, 2016ರಲ್ಲಿ ಪ್ರತಿಷ್ಠಿತ ಟ್ಯಾಗೋರ್ ಅವಾರ್ಡ್ಗೂ ನಾಮನಿರ್ದೇಶನಗೊಂಡಿದ್ದರು. ಪುಣೆಯ ಎಂಐಟಿ-ವರ್ಲ್ಡ್ ಪೀಸ್ ಯೂನಿವರ್ಸಿಟಿಯಲ್ಲಿರುವ ಸಂತ ಧ್ಯಾನೇಶ್ವರ ವರ್ಲ್ಡ್ ಪೀಸ್ ಡೋಮ್ನಲ್ಲಿನ 54 ಕಂಚಿನ ಪ್ರತಿಮೆಗಳ ನಿರ್ಮಾತೃ ಕೂಡ ಇವರಾಗಿದ್ದಾರೆ.
1925ರಲ್ಲಿ ಜನಿಸಿದ ಇವರು, ಮಹಾರಾಷ್ಟ್ರದ ಧುಲೆ ಜಿಲ್ಲೆಯವರು. ತಂದೆ ಕಾರ್ಪೆಂಟರ್. ಎಳೆಯ ವಯಸ್ಸಿನಲ್ಲೇ ಕಲೆಯಲ್ಲಿ ಅತಿಯಾದ ಆಸಕ್ತಿಯನ್ನು ಬೆಳೆಸಿಕೊಂಡು ಇಂದು ದೇಶದ ಅಗ್ರಗಣ್ಯ ಶಿಲ್ಪಿ ಎನಿಸಿಕೊಂಡಿದ್ದಾರೆ. ಕೇವಲ ಐದನೇ ಕ್ಲಾಸ್ ಓದಿರುವ ಇವರು ನಿರ್ಮಿಸಿರುವ ಶಿಲ್ಪಗಳು ಇಂಗ್ಲೆಂಡ್, ರಷ್ಯಾ, ಮಲೇಷ್ಯಾ, ಫ್ರಾನ್ಸ್ ಮುಂತಾದ ರಾಷ್ಟ್ರಗಳಲ್ಲೂ ಪ್ರತಿಷ್ಠಾಪನೆಗೊಂಡಿವೆ.
ವಯಸ್ಸು 93 ಆದರೂ ಇನ್ನೂ ಅವರ ಕಲಾ ಸೇವೆ ಮುಂದುವರೆದಿದೆ.
source: Betterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.