ಉಡುಪಿ: ರೈಲು ಹಳಿಯಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಕೂಲಿಕಾರ್ಮಿಕರೊಬ್ಬರು ತಮ್ಮ ಕಾಲು ದುರ್ಬಲಗೊಂಡಿದ್ದರೂ 3 ಕಿಲೋಮೀಟರ್ವರೆಗೆ ಓಡಿ ರೈಲು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಈ ಮೂಲಕ ನೂರಾರು ಮಂದಿಯ ಜೀವವನ್ನು ಉಳಿಸಿದ್ದಾರೆ.
ಉಡುಪಿಯಲ್ಲಿ ಈ ಘಟನೆ ನಡೆದಿದ್ದು, 53 ವರ್ಷ ಕೃಷ್ಣ ಪೂಜಾರಿ ರೈಲು ದುರಂತವನ್ನು ತಪ್ಪಿಸಿದ ಮಹಾನುಭಾವರಾಗಿದ್ದಾರೆ. ಯಾವುದೋ ಆರೋಗ್ಯ ಸಮಸ್ಯೆಯಿಂದ ಕಾಲಿನ ದುರ್ಬಲತೆಯ ಸಮಸ್ಯೆಗೆ ಇವರು ಒಳಗಾಗಿದ್ದಾರೆ. ನಿತ್ಯ ನಡೆಯುವ ಮೂಲಕ ಕಾಲಿನ ಶಕ್ತಿಯನ್ನು ಮರಳಿ ಪಡೆಯಬಹುದು ಎಂದು ವೈದ್ಯರು ಇವರಿಗೆ ಸಲಹೆ ನೀಡಿದ್ದರು.
ಕೊರಂಗ್ರಪಾಡಿಯ ಬ್ರಹ್ಮಸ್ಥಾನ ನಾಗಬನ ಏರಿಯಾದಲ್ಲಿ ಇವರು ನಡೆಯುತ್ತಿದ್ದಾಗ, ರೈಲೊಂದು ಹಾದು ಹೋಯಿತು. ಈ ವೇಳೆ ಅವರು ಟ್ರ್ಯಾಕ್ ಬಿರುಕು ಬಿಡುತ್ತಾ ಬಂದಿರುವುದನ್ನು ಗಮನಿಸಿದ್ದಾರೆ. ಅದೇ ಹಳಿಯಲ್ಲಿ ಮತ್ತೊಂದು ರೈಲು ಬಂದಿದ್ದರೆ ದುರಂತ ಸಂಭವಿಸುವುದು ಖಚಿತವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕೃಷ್ಣ ಪೂಜಾರಿ, ನೋವಿನ ನಡುವೆಯೂ 3ಕಿಮೀ ಓಡಿ ರೈಲು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ಎರಡು ರೈಲಿನ ಆಗಮನವನ್ನು ತಡೆ ಹಿಡಿದಿದ್ದಾರೆ.
ಕೃಷ್ಣ ಪೂಜಾರಿಯವರ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
source: timesnow
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.