ಅಹ್ಮದಾಬಾದ್: ದೇಶದ ಮೊದಲ ಗೃಹ ಮಂತ್ರಿ ಸರ್ದಾರ್ ಪಟೇಲ್ ಅವರ ಗೌರವಾರ್ಥ, ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಾಣ ಮಾಡಲಾಗಿರುವ ಜಗತ್ತಿನ ಅತೀ ಎತ್ತರದ ‘ಏಕತಾ ಪ್ರತಿಮೆ’(Statue Of Unity) ಭಾರತದ ಎಂಜಿನಿಯರಿಂಗ್ ಕೌಶಲ್ಯದ ಗೌರವ ಕೂಡ ಆಗಿದೆ ಎಂದು ಮೂಲಸೌಕರ್ಯ ದಿಗ್ಗಜ Larsen & Toubro ಹೇಳಿದೆ.
33 ತಿಂಗಳಲ್ಲಿ ನಿರ್ಮಾಣಗೊಂಡಿರುವ ಈ ಪ್ರತಿಮೆ ರಸ್ತೆ ಪ್ರವೇಶದಿಂದ 182 ಮೀಟರ್ ಇದೆ ಮತ್ತು ನದಿ ಪ್ರವೇಶದಿಂದ 208.5 ಮೀಟರ್ ಇದೆ, ಚೀನಾದ 153 ಮೀಟರ್ ಎತ್ತರದ ಸ್ಪ್ರಿಂಗ್ ಟೆಂಪಲ್ ಬುದ್ಧಗಿಂತ ಇದು ಎತ್ತವಾಗಿದೆ. ಸ್ಪ್ರಿಂಗ್ ಟೆಂಪಲ್ ನಿರ್ಮಾಣಕ್ಕೆ ಚೀನಾ 11 ವರ್ಷ ತೆಗೆದುಕೊಂಡಿತ್ತು, ಆದರೆ ಭಾರತ 33 ತಿಂಗಳಲ್ಲಿ ಏಕತಾ ಪ್ರತಿಮೆಯನ್ನು ನಿರ್ಮಾಣ ಮಾಡಿದೆ.
2015ರ ಡಿಸೆಂಬರ್ 19ರಂದು ಇದರ ನಿರ್ಮಾಣ ಕಾರ್ಯ ಆರಂಭವಾಗಿತ್ತು, ದೇಶದಾದ್ಯಂತದ ರೈತರಿಂದ ಇದಕ್ಕಾಗಿ ಉಕ್ಕನ್ನು ಸಂಗ್ರಹ ಮಾಡಲಾಗಿದೆ.
ಅಕ್ಟೋಬರ್ 31ರಂದು ಸರ್ದಾರ್ ಜನ್ಮದಿನದಂದು ಮೋದಿ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ರೂ.2,989 ಕೋಟಿ ವೆಚ್ಚದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ಕಂಚಿನ ಲೇಪನವನ್ನು ಇದು ಒಳಗೊಂಡಿದ್ದು, ಸಂಪೂರ್ಣ ದೇಶೀ ನಿರ್ಮಿತವಾಗಿದೆ. 18,500 ಟನ್ ಬಲವರ್ಧಿತ ಸ್ಟೀಲ್, 6,500 ಟನ್ ರಚನಾತ್ಮಕ ಸ್ಟೀಲ್, 1,700 ಟನ್ ಕಂಚುಗಳನ್ನು ಇದಕ್ಕೆ ಬಳಸಲಾಗಿದೆ.
source: The hindu
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.