ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಮೊತ್ತ ಮೊದಲ ಪ್ರಯಾಣಿಕನಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊರಹೊಮ್ಮಿದ್ದಾರೆ.
ಹೊಸದಾಗಿ ನಿರ್ಮಾಣಗೊಂಡಿರುವ ಬಿಜೆಪಿ ಜಿಲ್ಲಾ ಕಛೇರಿಯನ್ನು ಉದ್ಘಾಟನೆಗೊಳಿಸುವ ಸಲುವಾಗಿ ಇಂದು ಅಮಿತ್ ಶಾ ಕಣ್ಣೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಹೊರಭಾಗದಲ್ಲಿ ನಿಂತಿದ್ದ ಅಪಾರ ಬೆಂಬಲಿಗರು ಅವರಿಗೆ ಸ್ವಾಗತವನ್ನು ಕೋರಿದರು.
ಈ ವಿಮಾನನಿಲ್ದಾಣ ಇನ್ನಷ್ಟೇ ಕಾರ್ಯಾರಂಭ ಮಾಡಬೇಕಿದ್ದು, ಇದರ ಉದ್ಘಾಟನಾ ಕಾರ್ಯವೂ ಡಿಸೆಂಬರ್ನಲ್ಲಿ ಜರುಗಲಿದೆ.
ಕರಿಪುರ ಮತ್ತು ಮಂಗಳೂರು ಏರ್ಪೋರ್ಟ್ನ್ನೇ ಇದುವರೆಗೆ ನೆಚ್ಚಿಕೊಂಡಿರುವ ಕಣ್ಣೂರು ಜನತೆಗೆ ಹೊಸದಾಗಿ ನಿರ್ಮಾಣಗೊಂಡಿರುವ ಹೊಸ ವಿಮಾನನಿಲ್ದಾಣ ಹೆಚ್ಚಿನ ಪ್ರಯೋಜನಕಾರಿಯಾಗಿದೆ.
source: Indianexpress
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.