ನವದೆಹಲಿ: ಅಮೆರಿಕಾ ಅಧ್ಯಕ್ಷರು ಬೈಬಲ್ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವಂತೆ, ಭಾರತದ ರಾಷ್ಟ್ರಪತಿಗಳು ವೇದಗಳ ಮೂಲಕ ಪ್ರಮಾಣವಚನ ಸ್ವೀಕಾರ ಮಾಡುವ ಕಾಲದ ಬಗ್ಗೆ ನಾನು ಕನಸು ಕಾಣುತ್ತಿದ್ದೇನೆ ಎಂದು ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
ಆರ್ಯ ಸಮಾಜದ ನಾಲ್ಕು ದಿನಗಳ ಜಾಗತಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಮೆರಿಕಾ ಅಧ್ಯಕ್ಷರು ಬೈಬಲ್ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವುದನ್ನು ನಾವು ನೋಡಿದ್ದೇವೆ, ಅದೇ ರೀತಿ ಭಾರತದ ರಾಷ್ಟ್ರಪತಿಗಳು ಕೈಯಲ್ಲಿ ವೇದಗಳನ್ನು ಹಿಡಿದು ಪ್ರಮಾಣವಚನ ಸ್ವೀಕರಿಸುವ ಕಾಲದ ಬಗ್ಗೆ ನಾನು ಕನಸು ಕಾಣುತ್ತಿದ್ದೇನೆ’ ಎಂದಿದ್ದಾರೆ.
ಈ ಜಾಗತಿಕ ಸಮಾವೇಶವನ್ನು ಆರ್ಯ ಸಮಾಜ ಅನುಯಾಯಿಗಳ ‘ಮಹಾಕುಂಭ’ ಎಂದು ಬಣ್ಣಿಸಿದ ಅವರು, ಇಂದು ದೇಶ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಋಷಿ ಜ್ಞಾನ ಪರಿಹಾರ ನೀಡಬಲ್ಲದು ಎಂದಿದ್ದಾರೆ.
ತನ್ನ ಕಳೆದುಹೋದ ಘನತೆಯನ್ನು ಮರಳಿಪಡೆಯಲು ಭಾರತ ವೇದಗಳತ್ತ ಹಿಂದಿರುಗುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ನಾಲ್ಕು ದಿನಗಳ ಸಮಾವೇಶದಲ್ಲಿ, ಗೋ ಕಲ್ಯಾಣ, ರೈತರ ಸಮಸ್ಯೆ, ಆರೋಗ್ಯ, ಪರಿಸರ ಸಮಸ್ಯೆ, ಪರಿಸರ ಸ್ನೇಹಿ ಕೃಷಿ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹಿಮಾಚಲ ಪ್ರದೇಶ ಗವರ್ನರ್ ಆಚಾರ್ಯ ದೇವ್ ವ್ರತ್ ತಿಳಿಸಿದ್ದಾರೆ.
source: www.hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.