ಮಹಾಕಾವ್ಯ ರಾಮಾಯಣವನ್ನು ರಚನೆ ಮಾಡಿದ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಶುಭ ಕೋರಿದ್ದಾರೆ.
ನವದೆಹಲಿ: ಮಹಾಕಾವ್ಯ ರಾಮಾಯಣವನ್ನು ಬರೆದಂತಹ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ವಾಲ್ಮೀಕಿ ಜಯಂತಿಯ ಅಂಗವಾಗಿ ಶುಭಾಶಯವನ್ನು ಕೋರಿದ್ದಾರೆ.
’ವಾಲ್ಮೀಕಿ ಜಯಂತಿಯ ಶುಭಾಶಯಗಳು, ನಾವು ಭಗವಾನ್ ವಾಲ್ಮೀಕಿಯವರ ಉದಾತ್ತವಾದ ಆದರ್ಶವನ್ನು ಸ್ಮರಿಸುತ್ತೇವೆ, ಅದರಲ್ಲೂ ಮುಖ್ಯವಾಗಿ ಸಾಮರಸ್ಯ, ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಅವರು ನೀಡಿದ ಪ್ರಾಮುಖ್ಯತೆ ಮಹತ್ವದ್ದಾಗಿದೆ’ ಎಂದಿದ್ದಾರೆ.
24 ಸಾವಿರ ಶ್ಲೋಕಗಳನ್ನು, 7 ಕಾಂಡಗಳನ್ನು ಹೊಂದಿರುವ ಮಹಾ ಕಾವ್ಯ ‘ರಾಮಾಯಣ’ವನ್ನು ರಚನೆ ಮಾಡಿರುವ ವಾಲ್ಮೀಕಿ ಅವರು ಆದಿ ಕವಿ, ಮಹರ್ಷಿ ಎಂದು ಪ್ರಸಿದ್ಧರಾಗಿದ್ದಾರೆ. ಕೆಟ್ಟ ಮನುಷ್ಯ ಉತ್ತಮನಾಗಿ ಪರಿವರ್ತನೆಗೊಂಡರೆ ಹೇಗೆ ಮಹರ್ಷಿಯಾಗಬಲ್ಲ ಎಂಬುದಕ್ಕೆ ವಾಲ್ಮೀಕಿ ಜೀವನ ಆದರ್ಶಪ್ರಾಯವಾಗಿದೆ.
ವಾಲ್ಮೀಕಿ ರಚಿಸಿದ ರಾಮಾಯಣವು ಅನೇಕ ಜನರ ಜೀವನವನ್ನು ಬದಲಿಸಿದ ಸಾಧನಾ ಸಿದ್ದಿ ಕಾವ್ಯವಾಗಿದೆ. ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ, ಬುದ್ಧಿ, ಮನಸ್ಸು, ಕ್ರಿಯೆ ಕರ್ಮಗಳನ್ನು ಸೂಕ್ತ ದಾರಿಯಲ್ಲಿ ನಡೆಸುವ ಕಾರ್ಯ ಮಾಡುತ್ತದೆ.
महर्षि वाल्मीकि जयंती की सभी देशवासियों को बहुत-बहुत शुभकामनाएं।
Greetings on Valmiki Jayanti. We remember the noble ideals of Bhagwan Valmiki, especially his emphasis on harmony, equality and social justice.
— Narendra Modi (@narendramodi) October 24, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.