ಧರ್ಮಸ್ಥಳ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಡೆಯವರು, ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯವನ್ನು ಉಳಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ‘ಶಬರಿಮಲೆಗೆ ತೆರಳುವವರು 48 ದಿನಗಳ ಬ್ರಹ್ಮಚರ್ಯ ವ್ರತವನ್ನು ಪಾಲಿಸುತ್ತಾರೆ. ಸಂಯಮ, ಮನೋನಿಗ್ರಹ ಈ ವ್ರತದ ಉದ್ದೇಶವಾಗಿರುತ್ತಾರೆ. ಮನಸ್ಸು ಸಂಯಮ ತಪ್ಪಿದರೆ ಮೀಟೂನಂತಹ ಪ್ರಕರಣಗಳು ನಡೆಯಲು ಕಾರಣವಾಗಬಹುದು’ ಎಂದಿದ್ದಾರೆ.
ಮಹಿಳೆಯರು ಹೋಗಿ ಪೂಜೆ ಮಾಡಬೇಕಾಗಿಲ್ಲ, ವಿದೇಶಗಳಲ್ಲೂ ಇಂತಹ ಕೆಲವೊಂದು ಪದ್ಧತಿಗಳಿವೆ. ಮಹಿಳೆಯರು ಹೋದರೆ ಏನೋ ಆಗಿ ಬಿಡುತ್ತದೆಯೆಂದಲ್ಲ, ಆದರೆ ಕೆಲವೊಂದು ಪರಂಪರೆ ಹಾಗೆಯೇ ಮುಂದುವರೆದರೆ ಉತ್ತಮ ಎಂದು ಅಭಿಪ್ರಾಯಿಸಿದ್ದಾರೆ.
’ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ, ಪರಂಪರೆ, ಭಕ್ತಿಗಳು ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ.
source; PRAJAVANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.