ಕಳೆದ ಐದು ದಿನಗಳಿಂದ ತೆರೆಯಲ್ಪಟ್ಟ ಶಬರಿಮಲೆ ದೇಗುಲದ ಬಾಗಿಲು ಇಂದು ತುಲಾ ಮಾಸ ಪೂಜೆ ಪೂರ್ಣವಾದ ಬಳಿಕ ರಾತ್ರಿ 10 ಗಂಟೆಗೆ ಮುಚ್ಚಲ್ಪಡಲಿದೆ. ಮಹಿಳೆಯರ ಪ್ರವೇಶದ ಯತ್ನ ಈ ಬಾರಿ ಸಂಪೂರ್ಣ ವಿಫಲವಾಗಿದೆ.
ಪಂಪಾ: ಮಹಿಳಾ ಭಕ್ತರ ಪ್ರವೇಶಕ್ಕೆ ಸಂಬಂಧಿಸಿದ ವಿವಾದದ ನಡುವೆಯೇ ಖ್ಯಾತ ಶಬರಿಮಲೆ ದೇಗುಲದ ಬಾಗಿಲು ಇಂದಿನಿಂದ ಮುಚ್ಚಲ್ಪಡುತ್ತದೆ.
ತುಲಾ ಮಾಸ ಪೂಜೆ ಪೂರ್ಣಗೊಂಡ ಬಳಿಕ ದೇಗುಲದ ಬಾಗಿಲನ್ನು ರಾತ್ರಿ ಸುಮಾರು 10 ಗಂಟೆಗೆ ಮುಚ್ಚಲಾಗುತ್ತಿದೆ. ರಾತ್ರಿ 7 ಗಂಟೆಯಿಂದಲೇ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿದೆ.
ದೇಗುಲದ ಬಾಗಿಲು ತೆರೆದು 5 ದಿನಗಳಾಗಿವೆ, ಸುಪ್ರೀಂಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಹಲವಾರು ಗೊಂದಲ, ಗುದ್ದಾಟಗಳು ನಡೆದಿವೆ. ಕೆಲ ಮಹಿಳೆಯರು ದೇಗುಲ ಪ್ರವೇಶದ ಯತ್ನ ಮಾಡಿದರಾದರೂ ಅದು ಸಾಧ್ಯವಾಗಿಲ್ಲ. ಇದುವರೆಗೆ ಒಟ್ಟು 12 ಮಹಿಳೆಯರು ದೇಗುಲ ಪ್ರವೇಶಿಸಲು ಪ್ರಯತ್ನಪಟ್ಟು ಸೋತಿದ್ದಾರೆ ಎನ್ನಲಾಗಿದೆ.
ಇನ್ನು ನವೆಂಬರ್ 5ರಂದು ಸಂಜೆ 5 ಗಂಟೆಗೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಬಳಿಕ ಎರಡು ತಿಂಗಳ ವಾರ್ಷಿಕ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಪರಿಸ್ಥಿತಿ ಮತ್ತೆ ಉದ್ರಿಕ್ತಗೊಳ್ಳುವ ಸಾಧ್ಯತೆ ಇದೆ.
Source; zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.