ವಾರಣಾಸಿಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ 36ನೇ ಇಂಡಿಯನ್ ಕಾರ್ಪೆಟ್ ಎಕ್ಸ್ಪೋವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದರು.
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ನಡೆದ 36ನೇ ಇಂಡಿಯನ್ ಕಾರ್ಪೆಟ್ಸ್ ಎಕ್ಸ್ಪೋವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದರು.
ಈ ವೇಳೆ ಮಾತನಾಡಿದ ಮೋದಿ, ‘ಉತ್ತರಪ್ರದೇಶದ ವಾರಣಾಸಿ, ಭದೋಹಿ ಮತ್ತು ಮಿರ್ಜಾಪುರ ನಗರಗಳು ಕಾರ್ಪೆಟ್ ಇಂಡಸ್ಟ್ರೀಯ ಪ್ರಮುಖ ಕೇಂದ್ರಗಳಾಗಲಿದೆ. ಕರಕುಶಲ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ’ ಎಂದಿದ್ದಾರೆ.
ಭಾರತ ಕರಕುಶಲಗಳ ದೀರ್ಘ ಪರಂಪರೆಯನ್ನು ಹೊಂದಿದೆ, ಈ ನಿಟ್ಟಿನಲ್ಲಿ ವಾರಣಾಸಿ ಮಹತ್ವದ ಪಾತ್ರವನ್ನು ವಹಿಸಿದೆ. ಸ್ವಾತಂತ್ರ್ಯ ಚಳುವಳಿ, ಸ್ವಾವಲಂಬನೆಯ ಹೋರಾಟ, ಗಾಂಧೀಜಿ ಸತ್ಯಾಗ್ರಹಕ್ಕೂ ಕರಕುಶಲಗಳು ಸ್ಫೂರ್ತಿಯಾಗಿತ್ತು ಎಂದಿದ್ದಾರೆ.
ಭಾರತ ಇಂದು ಕಾರ್ಪೆಟ್ನ ಅತೀದೊಡ್ಡ ಉತ್ಪಾದಕನಾಗಿದೆ, ಶೇ.35ರಷ್ಟು ಜಾಗತಿಕ ಮಾರುಕಟ್ಟೆ ಹಂಚಿಕೆಯನ್ನು ಇದು ಹೊಂದಿದೆ. ಈ ವಲಯದ ರಫ್ತು ಕೂಡ ಉತ್ತಮವಾಗಿದೆ. ಹೆಚ್ಚುತ್ತಿರುವ ಮಧ್ಯಮ ವರ್ಗ ಮತ್ತು ಕಾರ್ಪೆಟ್ ವಲಯಕ್ಕೆ ನೀಡಲಾಗುತ್ತಿರುವ ಬೆಂಬಲ ಈ ವಲಯದ ಪ್ರಗತಿಯ ಹಿಂದಿನ ಪ್ರಮುಖ ಅಂಶಗಳ ಎಂದಿದ್ದಾರೆ.
Source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.