ಮುಂಬಯಿ: ದೇಶದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತ ಆಂದೋಲನ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಥಾಣೆಯ ಉಲ್ಹಾಸ್ನಗರ್ ‘ಮಾ ಶಕ್ತಿ ಸೇವಾ ಸಂಸ್ಥೆ’ಯು ಸ್ವಚ್ಛತಾ ಅಭಿಯಾನದಿಂದ ಪ್ರೇರಿತಗೊಂಡು ಸಂಪೂರ್ಣ ಪರಿಸರ ಸ್ನೇಹಿ ಮಾದರಿಯಲ್ಲಿ ದುರ್ಗಾ ಪೆಂಡಾಲ್ನ್ನು ರಚನೆ ಮಾಡಿದೆ.
ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯನ್ನೇ ಥೀಮ್ ಆಗಿಟ್ಟುಕೊಂಡು ಪೆಂಡಾಲ್ ನಿರ್ಮಾಣಗೊಂಡಿದ್ದು, ಲಕ್ಷಾಂತರ ಶೇಂಗಾಗಳ ಸಿಪ್ಪೆಯನ್ನು ಇಲ್ಲಿ ಮರು ಬಳಕೆ ಮಾಡಲಾಗಿದೆ.
ಪಶ್ಚಿಮಬಂಗಾಳದಿಂದ ಸುಮಾರು 8 ಕಲಾವಿದರನ್ನು ಕರೆಸಿ ಶೇಂಗಾ ಸಿಪ್ಪೆಗಳಿಂದ ತಯಾರಾದ ಅಲಂಕಾರಿಕ ವಸ್ತುಗಳಿಂದ ಪೆಂಡಾಲ್ನ್ನು ವಿನ್ಯಾಸಗೊಳಿಸಲಾಗಿದೆ. ಸುಮಾರು 12 ಲಕ್ಷ ಶೇಂಗಾ ಸಿಪ್ಪೆಗಳನ್ನು ಇದಕ್ಕಾಗಿ ಬಳಸಲಾಗಿದೆ.
ಪೆಂಡಾಲ್ನುದ್ದಕ್ಕೂ ಸ್ವಚ್ಛ ಭಾರತ, ತ್ಯಾಜ್ಯ ನಿರ್ವಹಣೆ, ಮರುಬಳಕೆ ಇತ್ಯಾದಿಗಳ ಚಿತ್ರ ಸಹಿತ ಸಂದೇಶಗಳನ್ನು ನಾವು ಕಾಣಬಹುದಾಗಿದೆ. ಇವುಗಳನ್ನು ಶೇಂಗಾ ಸಿಪ್ಪೆಯಿಂದಲೇ ರಚನೆ ಮಾಡಲಾಗಿದೆ.
ದುರ್ಗಾ ಮಾತೆಯ ವಿಗ್ರಹವನ್ನು ಕೆಂಪು ಮಣ್ಣಿನಿಂದ ರಚನೆ ಮಾಡಲಾಗಿದ್ದು, ಯಾವುದೇ ರಾಸಾಯನಿಕಗಳನ್ನು ಬಳಸಲಾಗಿಲ್ಲ.
ಅಷ್ಟೇ ಅಲ್ಲದೇ ಸ್ವಯಂಸೇವಕರ ತಂಡವನ್ನು ರಚನೆ ಮಾಡಲಾಗಿದ್ದು, ಪೆಂಡಾಲ್ಗೆ ಆಗಮಿಸುವವರು ಕಸವನ್ನು ಹಾಕದಂತೆ ಈ ತಂಡ ನೋಡಿಕೊಳ್ಳುತ್ತದೆ. ನೈರ್ಮಲ್ಯ, ಸ್ವಚ್ಛತೆ ಸಾರುವ ಸಾಂಸ್ಕೃತಿ ಕಾರ್ಯಕ್ರಮಗಳನ್ನು ದಿನ ಇಲ್ಲಿ ಆಯೋಜಿಸಲಾಗುತ್ತದೆ.
source; NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.