ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಣೇಶ ಚತುರ್ಥಿಯನ್ನು “Namma subrahmanya” ತಂಡದಿಂದ ವಿಶಿಷ್ಟವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಕುಮಾರಧಾರ ಸ್ನಾನಘಟ್ಟ ಸ್ವಚ್ಛತೆ ಮಾಡುವ ಮೂಲಕ ಈ ಪುಣ್ಯ ಕಾರ್ಯಕ್ರಮಕದಲ್ಲಿ 25 ಜನರು ಭಾಗವಹಿಸಿದರು. ಎಲ್ಲಾ ಸಹಾಯವನ್ನಿತ್ತ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹಾಗೂ PDO ಅಧಿಕಾರಿಗೆ ತುಂಬು ಹೃದಯದ ಧನ್ಯವಾದಗಳು.
ಭಾರತ “ಸ್ವಚ್ಛವಾಗಬೇಕು, ಸ್ವಚ್ಛವಾಗಬೇಕು” ಅಂತ ನೀವು ಮನೆಯಲ್ಲೇ ಕುಳಿತು ಬೊಬ್ಬೆ ಹೊಡೆದರೆ ಏನೂ ಪ್ರಯೋಜನ..?
ಬೀದಿಗಿಳಿದು ಸ್ವಚ್ಛತೆ ಮಾಡಿದರೆ ಮಾತ್ರ swachha Bharatha ಮಾಡಲು ಸಾಧ್ಯ. ನಾವು ಹುಟ್ಟಿ ಬೆಳೆದ ಊರಿನ ಸ್ವಚ್ಛತೆಗಾಗಿ ಮಾಡಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರಲ್ಲಿ ಸಿಗುವ ಖುಷಿ ಹಾಗೂ ತೃಪ್ತಿ ಇನ್ಯಾವುದೇ ಕಾರ್ಯಕ್ರಮದಲ್ಲಿ ಸಿಗಲು ಸಾಧ್ಯವಿಲ್ಲ. ಮುಂದೊಂದು ದಿನ ಕುಕ್ಕೆ ಸುಬ್ರಹ್ಮಣ್ಯ, ದೇವಸ್ಥಾನಕ್ಕೆ ಹೆಸರುವಾಸಿಯಾದಂತೆ ಸ್ವಚ್ಛತೆಗೂ ಹೆಸರುವಾಸಿಯಾಗುತ್ತದೆ ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇದು ಸಾಕಾರಗೊಳ್ಳಲು ಸುಬ್ರಹ್ಮಣ್ಯದ ಪ್ರತಿಯೊಬ್ಬ ನಾಗರಿಕರೂ Namma Subrahmanya ತಂಡದಂತಹವರೊಂದಿಗೆ ಕೈ ಜೋಡಿಸಿದರೆ ಮಾತ್ರ ಸಾಧ್ಯ.
ಗಣೇಶ ಚತುರ್ಥಿಯನ್ನು ವಿಶಿಷ್ಟವಾಗಿ ಹಾಗೂ ಅದ್ದೂರಿಯಾಗಿ ನಿನ್ನೆ ‘ನಮ್ಮ ಸುಬ್ರಹ್ಮಣ್ಯ’ ತಂಡ ಆಚರಿಸಿತು. ಆದರೆ ಬೇರೆಯೇ ರೀತಿಯಲ್ಲಿ…
ನಿನ್ನೆ Namma subrahmanya ತಂಡವು ಕುಮಾರಧಾರ ಸ್ನಾನ ಘಟ್ಟ ಸ್ವಚ್ಛತೆ ಮಾಡುವ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿದೆ. ಪ್ಲಾಸ್ಟಿಕ್, ಬಟ್ಟೆ, ಬಾಟಲಿ ಹಾಗೂ ಇನ್ನಿತರ ಎಲ್ಲಾ ಕಸವನ್ನು “ನಮ್ಮ ಸುಬ್ರಹ್ಮಣ್ಯ” ತಂಡವು ಹೆಕ್ಕಿ ಶುಚಿಗೊಳಿಸಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಒಂದು ಮಿನಿ ಟ್ರಕ್ ನಷ್ಟು ಕಸ ವಿಲೇವಾರಿ ಮಾಡಲಾಯಿತು. ನಂತರ ಕುಮಾರಧಾರೆಯ ಸುತ್ತಮುತ್ತಲು ಇರುವ ಅಂಗಡಿ ಮತ್ತು ಹೋಟೆಲುಗಳಿಗೆ ಸ್ವಚ್ಛತೆಯನ್ನು ಕಾಪಾಡಲು ಕೋರಿಕೊಂಡೆವು. ಕಾರ್ಯಕ್ರಮ ಮುಗಿದ ಬಳಿಕ ಭಾಗವಹಿಸಿದವರ ಪ್ರಶ್ನೆ ಒಂದೇಯಾಗಿತ್ತು – “ಮುಂದಿನ ಸ್ವಚ್ಛತಾ ಕಾರ್ಯಕ್ರಮ ಯಾವಗ..? “
ನಮ್ಮಲ್ಲಿ ಇನ್ನಷ್ಟು ಹುರುಪು ತರಿಸಿದ ಕೆಲವು ಸನ್ನಿವೇಶಗಳು :-
1. ‘ನಮ್ಮ ಸುಬ್ರಹ್ಮಣ್ಯ’ ತಂಡವು ಸ್ವಚ್ಛತೆ ಮಾಡುವುದನ್ನು ಗಮನಿಸಿದ ಓರ್ವ ಬೆಂಗಳೂರು ಮೂಲದ ರೈಡರ್ “Madhukar Gowda” ರವರು ಗ್ಲೋವ್ಸ್ ಧರಿಸಿಕೊಂಡು ನಮ್ಮಂತೆ ಅವರೂ ಕೂಡ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು .
2. Venkatesh Sharma ಹಾಗೂ ಅವರ ‘ಪುಟ್ಟ ಬಾಲಕ’ ಕೆಲ ಕಾಲ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
3. ಕುಮಾರಧಾರ ನದಿ ತೀರದಲ್ಲಿ ಸಂಜೆಯ ಹೊತ್ತು ಕಾರ್ಯ ನಿರ್ವಹಿಸುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ನೌಕರ ಕೃಷ್ಣಾ ಎಂಬವರು ಭಾಗವಹಿಸಿದರು.
ಎಲ್ಲಾ ಸಹಾಯವನ್ನಿತ್ತ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹಾಗೂ PDO ಅಧಿಕಾರಿಗೆ ತುಂಬು ಹೃದಯದ ಧನ್ಯವಾದಗಳು. ಮೊದಲ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದ 25 ಜನರಿಗೆ ಅನಂತ ಅನಂತ ಧನ್ಯವಾದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.