ಗೌರಿ ಗಣೇಶ ಹಬ್ಬಕ್ಕೆ ಇನ್ನೆನು 3 ದಿನ ಬಾಕಿ ಉಳಿದಿದೆ. ಎಲ್ಲೆಡೆ ಅಬ್ಬರದ ತಯಾರಿಗಳು, ಸಂಭ್ರಮ ಸಡಗರದ ವಾತಾವರಣ ಸಿದ್ಧಗೊಂಡಿದೆ. ಇದರಲ್ಲೇ ವಿಶೇಷವಾಗಿ ಮೈಸೂರಿನ ಚಾಮರಾಜ ಜಿಲ್ಲೆಯ ಹತ್ತಿರ ಸುಮಾರ 14 ಕಿ.ಮೀ ದೂರದಲ್ಲಿ ಈ ಬಾರಿ ಗಣೇಶ ಚತುರ್ಥಿ ಹಬ್ಬಕ್ಕೆ ಒಬ್ಬ ಮುಸ್ಲಿಂ ಮನುಷ್ಯ ವಿಘ್ನನಿವಾರಕನ ಮೂರ್ತಿಯ ಪ್ರತಿಷ್ಠಾಪನೆಗೆ ಎಲ್ಲ ತಯಾರಿಗಳನ್ನು ನಡೆಸಿದ್ದಾನೆ.
61 ವರ್ಷದ ಟಿ. ರಹಮಾನ್ ನೀರಾವರಿ ಇಲಾಖೆಯ ನಿವೃತ್ತ ಉದ್ಯೋಗಿ, ಚಿಕ್ಕಹೊಳೆ ಜಲಾಶಯದ ಬಳಿಯ ಗಣೇಶನ ವಿಗ್ರಹ ಕಳವಾಗಿದ್ದರಿಂದ ಅಸಮಾಧಾನಗೊಂಡಿದ್ದರು. ’ಕಳೆದ ವರ್ಷ, ಚಿಕ್ಕಹೊಳೆ ಪಾರ್ಕ್ನಲ್ಲಿ ಇರಿಸಲಾಗಿದ್ದ ಗಣೇಶನ ವಿಗ್ರಹ ಕಳುವು ಆಗಿದ್ದರಿಂದ ನನಗೆ ಅತೀವ ಬೇಸರವಾಯಿತು ತದನಂತರ ಅದೇ ವಿಚಾರಗಳು ನನ್ನ ಕನಸಿನಲ್ಲಿಯೂ ಸಹ ಬರಲಾರಂಭಿಸಿದವು ಆದಕಾರಣ ದೇವರಿಗಾಗಿ ಹೊಸ ದೇವಾಲಯವೊಂದನ್ನು ನಿರ್ಮಿಸಬೇಕೆಂದು ಅಂದುಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ರಹಮಾನ್ ನಿವೃತ್ತಿಯ ನಂತರ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳಿಗೆ ಗೇಟ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ತಮಿಳುನಾಡಿನಲ್ಲಿ ತಯಾರಾಗಿರುವ ಗಣೇಶನ ಮೂರ್ತಿಯನ್ನು ಈ ಬಾರಿಯ ಗೌರಿ ಗಣೇಶ ಹಬ್ಬಕ್ಕೆ ಪ್ರತಿಷ್ಠಾಪಿಸಬೇಕೆಂದು ಆಸೆಯಿತ್ತು, ಆದರೆ ಕೆಲವೊಂದು ಕಾರಣಾಂತರಗಳಿಂದ ರಹಮಾನ್ ಅವರು ನಿರ್ಮಿಸುತ್ತಿರುವ ಗಣೇಶನ ದೇವಾಲಯ ಈ ಬಾರಿಯ ಗೌರಿ ಗಣೇಶ ಹಬ್ಬಕ್ಕೆ ಉದ್ಘಾಟನೆಯಾಗುತ್ತಿಲ್ಲ. ಆದಷ್ಟು ಬೇಗ ಈ ದೇವಾಲಯ ತೆರೆಯುವ ನಂಬಿಕೆ ಇದೆ’ ಎಂದು ರಹಮಾನ್ ಹೇಳಿದ್ದಾರೆ.
ಮಾಧ್ಯಮಗಳು ರಹಮಾನ್ ಅವರನ್ನು ಈ ಕಾರ್ಯಕ್ಕೆ ತಗುಲುವ ಖರ್ಚು ವೆಚ್ಚುಗಳ ಬಗ್ಗೆ ಕೇಳಿದಾಗ, ’ಇದು ದೇವರ ಕೆಲಸ, ಹಾಗಾಗಿ ನಾನು ಯಾವುದೇ ವಿವರಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ’ ಎಂದು ಉತ್ತರಿಸಲು ನಿರಾಕರಿಸದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.