ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಅನಕ್ಷರಸ್ಥ ಮತ್ತು ತುಸು ಅಕ್ಷರಸ್ಥ ಸಮುದಾಯಕ್ಕೂ ಉದ್ಯೋಗವನ್ನು ಒದಗಿಸುವ ಅವಕಾಶ ಉತ್ಪಾದನಾ ವಲಯಕ್ಕೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಪ್ರಧಾನಿಯವರು ‘ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಕಾರ್ಯ. ಆದರೆ ನಾವು ಭಾರತೀಯ ಉದ್ಯಮದಾರರ ಮತ್ತು ವಿದೇಶಿ ಕಂಪನಿಗಳ ತಿಕ್ಕಾಟವನ್ನು ಕಡಿಮೆಗೊಳಿಸಿ ಭಾರತದಲ್ಲಿ ಹೊಸ ಉತ್ಪಾದನಾ ಸಂಸ್ಥೆಗಳ ಉಗಮಕ್ಕೆ ಅವಕಾಶ ಕಲ್ಪಿಸಿಕೊಡಬೇಕು’ ಎಂದಿದ್ದಾರೆ.
400 ಮಿಲಿಯನ್ ತುಸು ಅಕ್ಷರಸ್ಥ ಮತ್ತು 400 ಮಿಲಿಯನ್ ಅನಕ್ಷರಸ್ಥರನ್ನು ಹೊಂದಿರುವ ಭಾರತಕ್ಕೆ ಉತ್ಪಾದನಾ ವಲಯದಿಂದ ಮತ್ತು ಕನಿಷ್ಠ ತಂತ್ರಜ್ಞಾನ ಸೇವೆಯಿಂದ ಉದ್ಯೋಗವಕಾಶಗಳು ಬರಬೇಕಾದುದು ಅತ್ಯಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.