ಮುಂಬಯಿ: ಉತ್ತರಪ್ರದೇಶದ ಅಲಹಾಬಾದ್ನಲ್ಲಿ ಈ ವರ್ಷ ಕುಂಭಮೇಳ ಜರುಗಲಿದ್ದು, ಈಗಿನಿಂದಲೇ ಭಾರೀ ಸಿದ್ಧತೆಗಳು ಜರುಗುತ್ತಿವೆ. ಸುಮಾರು 15 ಕೋಟಿ ಜನರು ಈ ಕುಂಭಮೇಳದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಮುಂಬಯಿಯಲ್ಲಿ ಕುಂಭಮೇಳ-2019ನ ಆನಿಮೇಶನ್ ವೀಡಿಯೋ ಬಿಡುಗಡೆ ಮಾಡಿ ಮಾತನಾಡಿದ ಯೋಗಿ, ಸರ್ಕಾರ ಈ ಮಹಾ ಸಮಾವೇಶಕ್ಕೆ ಮಾಡಿಕೊಳ್ಳುತ್ತಿರುವ ಸಿದ್ಧತೆಗಳ ಬಗ್ಗೆ ವಿವರಿಸಿದರು.
ಪ್ರತಿ ಸಲ 5 ಎಕರೆ ಪ್ರದೇಶದಲ್ಲಿ ಕುಂಭಮೇಳವನ್ನು ಆಯೋಜನೆಗೊಳಿಸಲಾಗುತಿತ್ತು, ಈ ಬಾರಿ 10 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗುತ್ತಿದೆ. ಈ ಹಿಂದೆ ಸರ್ಕಾರದ ಯಾವುದೇ ಪ್ರಯತ್ನ ಇಲ್ಲದೆಯೂ 12 ಕೋಟಿ ಜನರು ಇದಕ್ಕೆ ಆಗಮಿಸುತ್ತಿದ್ದಾರೆ, ಆದರೆ ಈ ಬಾರಿ ಸರ್ಕಾರ ಹೆಚ್ಚಿನ ಜನರ ಆಗಮನಕ್ಕೆ ಪ್ರಯತ್ನ ನಡೆಸುತ್ತಿದ್ದು, ಪ್ರವಾಸಿಗರ ಸಂಖ್ಯೆ 15 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಯೋಗಿ ಹೇಳಿದ್ದಾರೆ.
ದೇಶದ 6 ಲಕ್ಷ ಗ್ರಾಮಗಳ ಒಂದಿಷ್ಟು ಜನರಾದರೂ ಕುಂಭಮೇಳದಲ್ಲಿ ಭಾಗಿಯಾಗಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.