ನವದೆಹಲಿ: 2017ರ ಸಾಲಿನ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರ ಜೊತೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಸಂವಾದವನ್ನು ನಡೆಸಿದರು ಮತ್ತು ದೇಶದಲ್ಲಿ ಗುಣಮಟ್ಟದ ಶಿಕ್ಷನವನ್ನು ನೀಡುವಲ್ಲಿ ಅವರ ಪರಿಶ್ರಮವನ್ನು ಕೊಂಡಾಡಿದರು.
ಶಿಕ್ಷಣಕ್ಕಾಗಿ ಸಮರ್ಪಣಾ ಮನೋಭಾವವನ್ನು ಹೊಂದಿ, ಅದನ್ನೇ ಜೀವನ ಮಂತ್ರವನ್ನಾಗಿಸಿರುವ ಶಿಕ್ಷಕರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಮೋದಿ, ಶಿಕ್ಷಕ ಜೀವನದ ಕೊನೆಯವರೆಗೂ ಶಿಕ್ಷಕನಾಗಿಯೇ ಉಳಿಯುತ್ತಾನೆ ಎಂದರು.
ಜನಸಮುದಾಯವನ್ನು ಒಂದುಗೂಡಿಸಿ, ಆ ಮೂಲಕ ಅವರನ್ನು ಶೀಕ್ಷಣದ ಭಾಗವನ್ನಾಗಿ ಮಾಡಲು ಶಿಕ್ಷಕರು ಮುಂದಾಗಬೇಕು ಎಂದು ಪ್ರಧಾನಿ ಕರೆ ನೀಡಿದರು. ಅಲ್ಲದೇ ಗ್ರಾಮೀಣ ಭಾಗದ, ಹಿಂದುಳಿದ ವಿದ್ಯಾರ್ಥಿಗಳ ಸಾಮರ್ಥ್ಯ, ಪ್ರತಿಭೆಯನ್ನು ಹೊರತರುವಲ್ಲಿ ಮಹತ್ವದ ಪಾತ್ರ ನಿಭಾಯಿಸಬೇಕು ಎಂದರು.
ಸಂವಾದದ ವೇಳೆ, ಪುರಸ್ಕೃತ ಶಿಕ್ಷಕರು ಕೂಡ ಶಿಕ್ಷಕರಾಗಿ ತಮ್ಮ ಅನುಭವ, ಸ್ಫೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.