ವಿಶ್ವಸಂಸ್ಥೆ: ಶಾಲೆಗಳಲ್ಲಿ ನೈರ್ಮಲ್ಯವನ್ನು ಹೆಚ್ಚಿಸಿರುವ ಭಾರತ ಸರ್ಕಾರದ ಕಾರ್ಯವನ್ನು ವಿಶ್ವಸಂಸ್ಥೆ ಕೊಂಡಾಡಿದೆ. ಕಳೆದ ಹಲವು ವರ್ಷಗಳಿಂದ ನೈರ್ಮಲ್ಯವಿಲ್ಲದ ಶಾಲೆಗಳ ಸಂಖ್ಯೆ ಭಾರತದಲ್ಲಿ ಗಣನೀಯ ಇಳಿಕೆಯಾಗಿದೆ ಎಂದಿದೆ.
ವಿಶ್ವಸಂಸ್ಥೆ ತನ್ನ ವರದಿ ‘ಶಾಲೆಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ: 2018 ಜಾಗತಿಕ ಮೂಲಾಧಾರಿತ ವರದಿ’ಯಲ್ಲಿ, ಶಾಲೆಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಒದಗಿಸುವುದರಿಂದ ಆರೋಗ್ಯಕಾರಿ ಕಲಿಕಾ ವಾತಾವರಣ ಸಿಗುತ್ತದೆ, ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು ಋತುಸ್ರಾವದ ವೇಳೆಯೂ ಹಾಜರಾಗುತ್ತಾರೆ’ ಎಂದಿದ್ದಾರೆ.
ಭಾರತ ನೈರ್ಮಲ್ಯವನ್ನು ಶಾಲೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕ್ಷಿಪ್ರ ಪ್ರಗತಿಯನ್ನು ಕಂಡಿದೆ ಎಂದು ವರದಿ ಹೇಳಿದೆ.
10 ವರ್ಷಗಳ ಹಿಂದೆ ಭಾರತದ ಅರ್ಧದಷ್ಟು ಶಾಲೆಗಳಲ್ಲಿ ನೈರ್ಮಲ್ಯ ಇರಲಿಲ್ಲ, ಈಗ ಅದರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದು, ಎಲ್ಲಾ ಶಾಲೆಗಳಿಗೂ ನೈರ್ಮಲ್ಯ ದಾಪುಗಾಲು ಇಡುತ್ತಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.