ನವದೆಹಲಿ: ತ್ರಿಪುರಾ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುವ ನೂತನ ರೈಲ್ವೇ ಲೈನ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
45 ಕಿಮೀ ಉದ್ದದ ಈ ರೈಲ್ವೇ ಲಿಂಕ್ ತ್ರಿಪುರಾದ ಅಗರ್ತಾಲ ಮತ್ತು ಬಾಂಗ್ಲಾದ ಚಿತ್ತಗಾಂಗ್ನಲ್ಲಿನ ಆಖೌರ ನಗರವನ್ನು ಸಂಪರ್ಕಿಸಲಿದೆ, ಇದರ ಆರಂಭಿಕ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಈ ಯೋಜನೆಗೆ ಭಾರತದ ಕಡೆಯಿಂದ ಡೋನರ್ ರೂ.580 ಕೋಟಿಯ ಅನುದಾನವನ್ನು ನೀಡುತ್ತಿದ್ದು, ಬಾಂಗ್ಲಾದ ಕಡೆಯಿಂದ ಅದರ ವಿದೇಶಾಂಗ ಸಚಿವಾಲಯ ಅನುದಾನ ನೀಡುತ್ತಿದೆ ಎಂದಿದ್ದಾರೆ.
ಉಭಯ ದೇಶಗಳ ನಡುವಣ ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳು ಈ ರೈಲ್ವೇ ಲಿಂಕ್ನಿಂದ ವೃದ್ಧಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.