ಚಂಡೀಗಢ: ಹಿಂದೂ ನಂಬಿಕೆಯನ್ನು ಅಲ್ಲಾಡಿಸುವ ಉದ್ದೇಶದಿಂದಲೇ ಕೆಲವರು ಸರಸ್ವತಿ ನದಿ ಇಲ್ಲ, ಅದರ ಬಗೆಗಿನ ನಂಬಿಕೆ ಮಿಥ್ಯ ಎಂದು ವಾದಿಸಿದ್ದರು. ಆದರೀಗ ಅದೇ ಸರಸ್ವತಿ ನದಿ ಹರಿಯಾಣದ ಮಣ್ಣಲ್ಲಿ ಹರಿಯುವ ಕಾಲ ಸನ್ನಿಹವಾಗುತ್ತಿದೆ.
ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಸರಸ್ವತಿ ನದಿಯ ಪುನರುಜ್ಜೀವನಕ್ಕೆ ಹಲವಾರು ಕ್ರಮ ಕೈಗೊಂಡಿತ್ತು. ಹರಿಯಾಣ ಸರಸ್ವತಿ ಹೆರಿಟೇಜ್ ಡೆವಲಪ್ಮೆಂಟ್ ಬೋರ್ಡ್ ಸ್ಥಾಪನೆಗೊಂಡಿತ್ತು. ಇದರ ಮುಖೇನ ನೀರಾವರಿ ಸಚಿವಾಲಯದ ಸಹಾಯದೊಂದಿಗೆ ಸರಸ್ವತಿ ನದಿಗೆ ಸಂಬಂಧಿಸಿದಂತೆ ಜಲವಿಜ್ಞಾನ ಮತ್ತು ಭೂರೂಪಶಾಸ್ತ್ರದ ಅಧ್ಯಯನವನ್ನು ಅಲ್ಲಿ ನಡೆಸಲಾಗುತ್ತಿದೆ.
ಇದೀಗ ಅಲ್ಲಿನ ಸರ್ಕಾರ ಇಸ್ರೋ, ನ್ಯಾಷನಲ್ ಇನ್ಸ್ಟಿಟ್ಯೂಟ್ ಹೈಡ್ರೋಲಾಜಿ, ಜಿಯೋಲಾಜಿಕಲ್ ಸ್ಟಡಿ ಆಫ್ ಇಂಡಿಯಾದ ಸಹಾಯವನ್ನು ಪಡೆದುಕೊಂಡು ಸರಸ್ವತಿ ನದಿ ಪುನರುಜ್ಜೀವನ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಈ ನದಿ ರಾಷ್ಟ್ರೀಯ ಪರಂಪರೆ ಎಂದು ಅಲ್ಲಿನ ಸಚಿವೆ ಕವಿತಾ ಜೈನ್ ಹೇಳಿದ್ದಾರೆ. ಇದಕ್ಕೆ ಅಂತಾರಾಷ್ಟೀಯ ಮನ್ನಣೆ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಅಲ್ಲಿನ ಸರ್ಕಾರ ಹೇಳಿದೆ.
ಆದಿ ಬದ್ರಿ ಸರಸ್ವತಿ ನದಿಯ ಉಗಮ ಸ್ಥಾನವೆಂದು ನಂಬಲಾಗಿದ್ದು, ಈ ನದಿಯ ತಟದಲ್ಲೇ ವೇದಗಳನ್ನು ಬರೆಯಲಾಗಿದೆ ಎಂಬ ನಂಬಿಕೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.