ನವದೆಹಲಿ: ಭಾರತದ ರಾಜಕೀಯ ಬಿಕ್ಕಟ್ಟನ್ನು ಪಾಕಿಸ್ಥಾನಕ್ಕೆ ಹೋಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಕಿಡಿಕಾರಿದ್ದಾರೆ.
ಭಾರತವನ್ನು ರಾಹುಲ್ ಮೂರನೇ ದರ್ಜೆಯ ರಾಷ್ಟ್ರದೊಂದಿಗೆ ಹೋಲಿಕೆ ಮಾಡಿದ್ದು ಅವಮಾನಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಕರ್ನಾಟಕ ಈಗ ನಮ್ಮ ಕೈಯಲ್ಲಿದೆ, ಅದಕ್ಕಾಗಿ ಅವರು ಹೆದರುತ್ತಿದ್ದಾರೆ. ತಮ್ಮ ನಿಯಂತ್ರಣವನ್ನು ಅವರು ಕಳೆದುಕೊಂಡಿದ್ದಾರೆ’ ಎಂದಿದ್ದಾರೆ.
‘ರಾಹುಲ್ ಬಿಜೆಪಿ, ಮೋದಿ ಅಥವಾ ಯಾರನ್ನಾದರೂ ಟೀಕಿಸಬಹುದು, ಆದರೆ ದೇಶದ ಮೇಲೆ ದಾಳಿ ಮಾಡಬಾರದು. ದೇಶ ಅತ್ಯಮೂಲ್ಯವಾದುದು. ಅದನ್ನು ಮೂರನೇ ದರ್ಜೆಯ ರಾಷ್ಟ್ರದೊಂದಿಗೆ ಹೋಲಿಕೆ ಮಾಡುವುದು ಅವಮಾನ. ಅವರಿಗೆ ಸ್ವಲ್ಪವಾದರೂ ಸೆನ್ಸ್ ಇದೆಯಾ? ನನಗನಿಸುತ್ತದೆ ಅವರು ಮೆಂಟಲ್ ಚೆಕ್ಅಪ್ ಮಾಡಿಕೊಳ್ಳಬೇಕೆಂದು’ ಎಂದು ಸ್ವಾಮಿ ಖಾರವಾಗಿ ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.