ಸೈಫೈ: ಉತ್ತರಪ್ರದೇಶ ಸೈಫೈನಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಕೃಷ್ಣ ಮೂರ್ತಿ ಒಂದು ಎಂಜಿನಿಯರಿಂಗ್ ಅದ್ಭುತವೂ ಆಗಿದೆ. 51 ಅಡಿ ಎತ್ತರದ, 60 ಟನ್ ಹಿತ್ತಾಳೆ ಮತ್ತು ಕಂಚು ಮಿಶ್ರಿತ ಈ ಮೂರ್ತಿ ವಿಭಿನ್ನತೆಯಲ್ಲಿ ವೈವಿಧ್ಯತೆಯನ್ನು ಸಾರುತ್ತಿದೆ. ಅಲ್ಲದೇ ಧಾರ್ಮಿಕ ಕನಸಿನ ಸಾಕಾರವೂ ಹೌದು.
ರಥ ಓಡಿಸುವ ಕೃಷ್ಣನ ಮೂರ್ತಿ ಇದಾಗಿದ್ದು, ಹಲವಾರು ಕಥೆಗಳನ್ನು ಇದು ಹೇಳುತ್ತದೆ. ಈ ಮೂರ್ತಿಯ ಅಡಿಪಾಯದ ಕಾರ್ಯವನ್ನು 250 ದಲಿತ ಮತ್ತು ಹಿಂದುಳಿದ ಬುಡಕಟ್ಟು ಜನಾಂಗದ ಕಾರ್ಯಪಡೆ ವಹಿಸಿಕೊಂಡಿದೆ. ಅಲ್ಲದೇ ಸೋನ್ಭಾದ್ರ, ನೋಯ್ಡಾ, ಇತರ ಭಾಗಗಳ ಸಿಖ್ ಕಾರ್ಮಿಕರೂ ಮೂರ್ತಿ ತಯಾರಿಕ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಈ ಭವ್ಯ ಮೂರ್ತಿ ಕ್ರಿಶ್ಚಿಯನ್ ಕಲಾವಿದ ಎಡ್ವರ್ಡ್ ಬ್ರೆತೆಟ್ ಅವರ ಕನಸಿನ ಕೂಸು, ಇದರ ಬಣ್ಣದ ಜವಾಬ್ದಾರಿಯನ್ನು ಭಾರತೀಯ ಮೂಲದ ದುಬೈ ಕಲಾವಿದ ಮೊಹಮ್ಮದ್ ಹಸೀಬ್ ಅವರಿಗೆ ನೀಡಲಾಗಿದೆ. ಪ್ರಾಚಿ ಪ್ರತಾಪ್, ಪ್ರಶಾಂತ್ ಪ್ರತಾಪ್ರಂತಹ ದಿಗ್ಗಜ ಕಲಾವಿದರು ಇದರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಕೃಷ್ಣನ ಈ ಭವ್ಯ ಮೂರ್ತಿಯ ಯೋಜನೆಯನ್ನು ಸಮಾಜವಾದಿ ಮುಖಂಡ ಅಖಿಲೇಶ್ ಸಿಂಗ್ ಯಾದವ್ ಆರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.