ನವದೆಹಲಿ: ನೀರಿನ ಸಂರಕ್ಷಣೆ ನಮ್ಮ ಮುಂದಿರುವ ಅತೀದೊಡ್ಡ ಸವಾಲಾಗಿದೆ, ಭೂಮಿಯ ಕೇವಲ ಶೇ.0.014ರಷ್ಟು ನೀರು ಮಾತ್ರ ಜಗತ್ತಿನ 6.8 ಬಿಲಿಯನ್ ಜನರ ಉಪಯೋಗಗಕ್ಕೆ ಸಿಗುತ್ತಿದೆ. ಉಳಿದ ನೀರು ವ್ಯರ್ಥವಾಗುತ್ತಿದೆ.
ಇತ್ತೀಚಿಗಷ್ಟೇ ಕೇಪ್ಟೌನ್ ಒಂದು ಹನಿ ನೀರಿಲ್ಲದೆ ಬರಗಾಲಕ್ಕೆ ತುತ್ತಾದ ಸುದ್ದಿಯನ್ನು ನಾವು ಕೇಳಿದ್ದೇವೆ. ಜಗತ್ತಿನ 11 ನಗರಗಳು ಇಂತಹುದೇ ಸ್ಥಿತಿಯತ್ತ ಹೊರಳುತ್ತಿದೆ.
ಭಾರತ ಕೂಡ ನೀರಿನ ಬಿಕ್ಕಟ್ಟಿಗೆ ಒಳಗಾಗುತ್ತಿದೆ ಎಂದು ಯುನೆಸ್ಕೋದ ವರದಿ ತಿಳಿಸಿದೆ. ಆದರೆ ಈ ಸಮಸ್ಯೆ ನಿವಾರಣೆಗೆ ನಾವು ತೆಗೆದುಕೊಂಡು ಕ್ರಮಗಳು ಅತ್ಯಲ್ಪವಾಗಿದೆ. ನಮ್ಮಿಂದ ನೀರಿನ ಬಿಕ್ಕಟ್ಟು ಎದುರಿಸಲು ಸಾಧ್ಯವೇ? ಖಂಡಿತ ಅಸಾಧ್ಯ. ನೀರಿಲ್ಲದೆ ಒಂದು ದಿನವೂ ಬದುಕುವುದನ್ನು ಕಲ್ಪಿಸಲು ಅಸಾಧ್ಯ.
ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಭಾರತದ ಉದ್ಯಮಿಗಳ ತಂಡವೊಂದು ಕೆಮಿಕಲ್ ಬಳಸದೆ ನೀರನ್ನು ಮರುಬಳಕೆ ಮಾಡುವ ಮಾರ್ಗೋಪಾಯಗಳನ್ನು ಕಂಡುಹಿಡಿಯುವಲ್ಲಿ ನಿರತವಾಗಿದೆ. ಇದಕ್ಕಾಗಿ ಬ್ಲಾಕ್-ಚೈನ್ ಆಧಾರಿತ ತಂತ್ರಜ್ಞಾನ ಬಳಸುತ್ತಿದೆ.
‘ವಾಟರ್ 2 ಆಲ್ (W2A) ಟ್ಯಾಗ್ಲೈನ್ನೊಂದಿಗೆ ತಂಡ ನೀರಿನ ಮರುಬಳಕೆಯ ಮಾಡಿ ಅದನ್ನು ಮಾನವ ಉಪಯೋಗಗಕ್ಕೆ ಯೋಗ್ಯ ಮಾಡುವಲ್ಲಿ ನಿರತವಾಗಿದೆ. ನೀರಿನ ಪ್ರತಿ ಹನಿಯನ್ನೂ ಸಮರ್ಥವಾಗಿ ಬಳಸಲು ಬ್ಲಾಕ್ ಚೈನ್ ಸೊಲ್ಯೂಷನ್ ಸಹಕಾರಿಯಾಗಲಿದೆ ಎಂದು ಅಕ್ವಾಯಿನ್ ಐಎನ್ಸಿ ಸಲಹೆಗಾರ ಸುಭ್ರಾಂಶ್ ರಾಯ್ ಹೇಳಿದ್ದಾರೆ.
ಇಂಟೆಲಿಜೆಂಟ್ ತಂತ್ರಜ್ಞಾನ ಬಳಸಿ ಮಾಲಿನ್ಯಕಾರಕವಿಲ್ಲದ, ಕಡಿಮೆ ದರದ, ಮರುಬಳಕೆಯ ಕುಡಿಯುವ ನೀರನ್ನು ಉತ್ಪಾದಿಸುವಲ್ಲಿ ಅಕ್ವಾಯಿನ್ ನಿರತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.