ಮೈಸೂರು: ಮತದಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕೆಎಂಎಫ್ ಉತ್ಪಾದಿಸುವ 30,000 ‘ನಂದಿನಿ’ ಮಿಲ್ಕ್ ಪಾಕೆಟ್ಗಳ ಮೇಲೆ,
ಮತ್ತು ಬಸ್ ಟಿಕೇಟ್ಗಳ ಮೇಲೆ ‘ನಿಮ್ಮ ಮತ, ನಿಮ್ಮ ಹಕ್ಕು’ , ಮೇ.12ರಂದು ತಪ್ಪದೇ ಮತದಾನ ಮಾಡಿ ಎಂಬ ಘೋಷಣೆಯನ್ನು ಬರೆಯಲಾಗಿದೆ.
ಹಾಲು ಪ್ರತಿ ಮನೆಗೂ ಅತ್ಯಗತ್ಯವಾದ ವಸ್ತು, ಕೆಎಂಎಫ್ ರಾಜ್ಯದ ಅತೀದೊಡ್ಡ ಹಾಲು ಸರಬರಾಜು ಸಂಸ್ಥೆ, ಹೀಗಾಗೀ ಚುನಾವಾಣಾ ಆಯೋಗ ಹಾಲಿನ ಪ್ಯಾಕೇಟ್ ಮೇಲೆ ಅತೀ ಮುಖ್ಯ ಮತದಾನ ಸಂದೇಶವನ್ನು ಮುದ್ರಿಸುವಂತೆ ಮಾಡಿದೆ.
ಈ ಬಾರಿ ರಾಜ್ಯದಲ್ಲಿ ಶೇ.75ರಷ್ಟು ಮತದಾನವಾಗುವಂತೆ ಮಾಡುವ ಗುರಿಯನ್ನು ಚುನಾವಣಾ ಆಯೋಗ ಹೊಂದಿದೆ. ಹೀಗಾಗಿ ಮತದಾನ ಜಾಗೃತಿಗೆ ಹಲವಾರು ಕ್ರಮಗಳನ್ನು ಅನುಸರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.