ಬೆಂಗಳೂರು: ಸೌಹಾರ್ದತೆ, ದೇಶಪ್ರೇಮವನ್ನು ಉತ್ತೇಜಿಸುವ ಸಲುವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಅಂತರ್ ಧರ್ಮೀಯ ಸಮ್ಮೇಳನ ಜರಗಿದ್ದು, ವಿವಿಧ ಧರ್ಮಗಳ ಅನೇಕ ನಾಯಕರು ಇದರಲ್ಲಿ ಭಾಗಿಯಾಗಿದ್ದರು.
ದೇಶಭಕ್ತಿ ಸ್ಫೂರ್ತಿ, ಕೋಮು ಸೌಹಾರ್ದತೆ, ಜನರಲ್ಲಿ ರಾಷ್ಟ್ರೀಯ ಏಕೀಕರಣದ ಭಾವನೆಯನ್ನು ಮೂಡಿಸುವ ಸಲುವಾಗಿ ಇಲ್ಮ್-ಒ-ಹುನರ್ ಎಂಬ ಸಂಸ್ಥೆ ಈ ಅಂತರ್ ಧರ್ಮೀಯ ಸಮ್ಮೇಳನವನ್ನು ಆಯೋಜನೆಗೊಳಿಸಿತ್ತು.
ಜೈನ ಧರ್ಮಗುರು ಆಚಾರ್ಯ ಲೋಕೇಶ್ ಮನಿ, ಇಮಾಮಿ ಮೌಲಾನ ಉಮರ್ ಅಹ್ಮದ್ ಇಲ್ಯಾಸಿ, ಭಾರತೀಯ ಸಂತ ಸಮಿತಿಯ ಆಚಾರ್ಯ ಪ್ರಮೋದ್ ಕೃಷ್ಣನ್, ಸಿಖ್ ಗುರು ಪರಮ್ಜೀತ್ ಸಿಂಗ್ ಸಂಧೋಕ್, ಎಎಪಿಯ ಕುಮಾರ್ ವಿಶ್ವಾಸ್ ಸೇರಿದಂತೆ ಹಲವಾರುಮಂದಿ ಇದರಲ್ಲಿ ಭಾಗಿಯಾಗಿದ್ದರು.
ಕೇವಲ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯಿಂದ ಮಾತ್ರ ಧರ್ಮ ಧರ್ಮಗಳ ನಡುವೆ ಸೌಹಾರ್ದತೆಯನ್ನು ಮೂಡಿಸಬಹುದು ಎಂದು ಎಲ್ಲರೂ ಇಲ್ಲಿ ಒಮ್ಮತದಿಂದ ಅಭಿಪ್ರಾಯಿಸಿದರು. ಅಲ್ಲದೇ ಮುಂದಿನ ಪೀಳಿಗೆಯನ್ನು ಸಂರಕ್ಷಿಸುವುದಕ್ಕಾಗಿ ದೇಶವನ್ನು ಶಿಕ್ಷಿತಗೊಳಿಸಬೇಕು ಎಂದು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.