ನವದೆಹಲಿ: ಜಗತ್ತಿನ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್ಮಹಲ್ ದೇಶದ ಆಸ್ತಿಯೇ ಹೊರತು ಯಾವುದೇ ಧಾರ್ಮಿಕ ಮಂಡಳಿಯ ಆಸ್ತಿಯಲ್ಲ ಎಂದು ಮೊಘಲ್ ರಾಜ ಬಹದ್ದೂರ್ ಷಾ ಜಫರ್ನ ವಂಶಸ್ಥರಾಗಿರುವ ವೈಎಚ್ ಟುಸಿ ಹೇಳಿದ್ದಾರೆ.
ಸುನ್ನಿ ವಕ್ಫ್ ಮಂಡಳಿಗೆ ತಾಜ್ ಮಹಲ್ನ ಮಾಲಿಕತ್ವವಾಗಲಿ, ಬಾಬ್ರಿ ಮಸೀದಿ ಜಾಗದ ಮಾಲಿಕತ್ವವಾಗಲಿ ಕೇಳುವ ಹಕ್ಕಿಲ್ಲ. ಶಹಜಹಾನ್ ವಕ್ಫ್ ಮಂಡಳಿಯ ಪರವಾಗಿ ದಾಖಲೆಗಳನ್ನು ಬರೆದಿಟ್ಟಿಲ್ಲ ಎಂದಿದ್ದಾರೆ.
ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಮಾಡಬಾರದು ಎಂಬುದಕ್ಕೆ ಯಾವ ಕಾರಣವೂ ನನಗೆ ಸಿಗುತ್ತಿಲ್ಲ. ಧರ್ಮಗಳನ್ನು ಬೆಸೆಯುವ ಯಾವುದೇ ಕಾರ್ಯವನ್ನಾದರೂ ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ.
ವಕ್ಫ್ ಮಂಡಳಿ ಭೂ ಕಬಳಿಸುವ ದೊಡ್ಡ ಮಂಡಳಿ. ಅವರ ಕಛೇರಿಯೊಳಗೆ ಸರಿಯಾದ ಕುರ್ಚಿ ಮೇಜುಗಳೇ ಇಲ್ಲ. ಅವರೇಗೆ ಅಷ್ಟು ದೊಡ್ಡ ತಾಜ್ಮಹಲ್ನ್ನು ನಿರ್ವಹಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.