ಮಂಗಳೂರು: ನರೇಂದ್ರ ಮೋದಿ ಸರ್ಕಾರ ನಾಲ್ಕನೇ ವರ್ಷದತ್ತ ಮುನ್ನುಗ್ಗತ್ತಿರುವುದನ್ನು ಬಿಜೆಪಿ ಕಾರ್ಯಕರ್ತರು ಇನ್ನಿಲ್ಲದಂತೆ ಸಂಭ್ರಮಿಸುತ್ತಿದ್ದಾರೆ. ದೊಡ್ಡ ದೊಡ್ಡ ಸಮಾರಂಭಗಳನ್ನು ನಡೆಸಲಾಗುತ್ತಿದೆ. ಇನ್ನು ಕೆಲವು ಮೋದಿ ಅಭಿಮಾನಿಗಳು ಹೆಚ್ಚು ಸದ್ದು ಮಾಡದೆ ಉತ್ತಮ ಕಾರ್ಯದ ಮೂಲಕ ಈ ಸಂತೋಷವನ್ನು ಸಂಭ್ರಮಿಸುತ್ತಿದ್ದಾರೆ.
ಮಂಗಳೂರಿನ 44 ವರ್ಷ ಆಟೋ ಡ್ರೈವರ್ ಎಸ್.ಸತೀಶ್ ಪ್ರಭು ಅವರು ಮೋದಿ ಸರ್ಕಾರ 3 ವರ್ಷ ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಅತ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಶುಕ್ರವಾರದಿಂದ ನಾಲ್ಕು ದಿನಗಳವರೆಗೆ 5 ಕಿ.ಮೀವರೆಗೆ ಅವರ ಆಟೋ ದರ ಕೇವಲ 1 ರೂಪಾಯಿ ಆಗಿರಲಿದೆ.
ಈ ಬಗ್ಗೆ ಅವರು ಪೋಸ್ಟರ್ ಹಾಕಿ ಘೋಷಣೆಯನ್ನೂ ಮಾಡಿದ್ದಾರೆ. ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ನಾಲ್ಕು ದಿನ ಆಟೋ ದರ 5 ಕಿ.ಮೀವರೆಗೆ 1ರೂಪಾಯಿ ಆಗಿರಲಿದೆ ಎಂದಿದ್ದಾರೆ.
ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿರುವ ಮೋದಿಗೆ ಧನ್ಯವಾದ ಹೇಳುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದರಿಂದ ಮಧ್ಯಮವರ್ಗದವರೆಗೆ ತುಸು ಹಣ ಉಳಿತಾಯ ಮಾಡಲು ಸಹಾಯಕವಾಗುತ್ತದೆ ಎಂದಿದ್ದಾರೆ.
ಮೋದಿ ಪ್ರಧಾನಿಯಾದಗಲೂ ಅವರು ಈ ರೀತಿ ದರ ಕಡಿತಗೊಳಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.