ನವದೆಹಲಿ: ಪ್ರವಾದಿ ಮೊಹಮ್ಮದ್ ಜನ್ಮ ದಿನವಾದ ಇಂದು ಮುಸ್ಲಿಂ ಹಬ್ಬ ಮಿಲಾದ್-ಅನ್-ನಬಿ ಸಂದರ್ಭ ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾದಿ ಮೊಹಮ್ಮದ್ ಜನ್ಮ ದಿನವಾದ ಇಂದು ಮುಸ್ಲಿಂ ಹಬ್ಬ ಮಿಲಾದ್-ಅನ್-ನಬಿ ಸಂದರ್ಭ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಶುಭ ಸಂದರ್ಭವು ಸಮಾಜದಲ್ಲಿ ಸಾಮರಸ್ಯ ಮತ್ತು ಐಕ್ಯತೆ ಹೆಚ್ಚಿಸಲಿ ಹಾಗೂ ಶಾಂತಿ ಮತ್ತು ಸಮೃದ್ಧಿ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.
Greetings on Milad-un-Nabi. May this occasion deepen the spirit of harmony & unity in our society & may there always be peace & prosperity.
— Narendra Modi (@narendramodi) December 12, 2016
ಪ್ರವಾದಿ ಮೊಹಮ್ಮದ್ ಅವರ ಸಂದೇಶವಾದ ‘ಈ ಶುಭ ಸಂದರ್ಭವು ಸಮಾಜದಲ್ಲಿ ಸಾಮರಸ್ಯ ಮತ್ತು ಐಕ್ಯತೆ ಹೆಚ್ಚಿಸಲಿ ಹಾಗೂ ಶಾಂತಿ ಮತ್ತು ಸಮೃದ್ಧಿ ಇರಲಿ ಸಾರ್ವತ್ರಿಕ ಭಾತೃತ್ವ, ಸಹಾನುಭೂತಿ ಮತ್ತು ಸಹನೆಯಿಂದ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡಲಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
Heartiest greetings & best wishes to all my fellow countrymen, in India and abroad on Milad-un-Nabi #PresidentMukherjee
— President of India (@RashtrapatiBhvn) December 12, 2016
May Holy Prophet’s message, inspire us to work towards universal brotherhood, compassion, tolerance & well-being of all #PresidentMukherjee
— President of India (@RashtrapatiBhvn) December 12, 2016
ಪ್ರವಾದಿ ಮೊಹಮ್ಮದ್ ಅವರ ಜೀವನ ಮತ್ತು ಆದರ್ಶಗಳನ್ನು ಎಲ್ಲರೂ ನೆನಪಿಸಿಕೊಳ್ಳಬೇಕು ಮತ್ತು ಮನುಕುಲದ ಸೇವೆ ತಮ್ಮನ್ನು ತಾವು ಅರ್ಪಿಸಬೇಕು ಎಂದು ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ರು ಸಾರ್ವತ್ರಿಕ ಭಾತೃತ್ವ, ಸಹಾನುಭೂತಿ ಮತ್ತು ಮಾನವೀಯತೆಯ ಮಾರ್ಗವನ್ನು ತೋರಿಸಿಕೊಟ್ಟಿದ್ದು, ಅವರ ಶಾಂತಿಯುತ ಮತ್ತು ಸಾಮರಸ್ಯದ ಮಾರ್ಗದರ್ಶನ ಮುಂದುವರೆಯಲಿ ಎಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.