ಜೈಸಲ್ಮೇರ್: ಭಾರತ ತಾಂತ್ರಿಕ ಪರಿಹಾರಗಳು ಸೇರಿದಂತೆ ಎಲ್ಲ ಪರಿಣಾಮಕಾರಿ ವಿಧಾನಗಳನ್ನು ಬಳಸಿ ಡಿಸೆಂಬರ್ 2018ರ ಒಳಗಾಗಿ ಭಾರತ-ಪಾಕಿಸ್ಥಾನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಿದೆ ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಗಡಿ ಭದ್ರತಾ ಪಡೆ ಅಧಿಕಾರಿಗಳೊಂದಿಗೆ ಗಡಿ ಪ್ರದೇಶದ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಒಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಭಾರತ-ಪಾಕ್ ಗಡಿಯನ್ನು ನಿರ್ವಹಣಾ ವ್ಯವಸ್ಥೆಯೊಂದಿಗೆ ಮುಚ್ಚಲಾಗುವುದು ಎಂದು ಹೇಳಿದ್ದಾರೆ.
ಪಾಕ್ ಜೊತೆ ಗಡಿ ಹಂಚಿಕೊಳ್ಳುವ ಹಾಗೂ ಇತರ ಗಡಿ ರಾಜ್ಯಗಳ ಸಲಹೆಗಳನ್ನು ಪಡೆದ ಬಳಿಕ ಗಡಿ ಭದ್ರತೆ ಗ್ರಿಡ್ ಸ್ಥಾಪಿಸಲಾಗುವುದು. ಇದು ಹೊಸ ಯೋಜನೆಯಾಗಿದ್ದು, ಇದನ್ನು ಕೇಂದ್ರ ಮಟ್ಟದಲ್ಲಿ ಗೃಹ ಕಾರ್ಯದರ್ಶಿಗಳು, ಬಿಎಸ್ಎಫ್ ಪಡೆಗಳು ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿಗಳು ನಿಯತಕಾಲಿಕವಾಗಿ ಕೇಂದ್ರೀಕರಿಸಲಿದ್ದಾರೆ.
ಗುಜರಾತ್ನ ಸರ್ ಕ್ರೀಕ್ ಮತ್ತು ರಿವರಿನ್ ಪ್ರದೇಶ, ಸೇರಿದಂತೆ ಸುಮಾರು 3,323 ಕಿ.ಮೀ. ಪ್ರದೇಶದಲ್ಲಿ ಗಡಿ ಭದ್ರತೆ ಮತ್ತು ಸಡಿ ಮುಚ್ಚಲು ತಂತ್ರಜ್ಞಾನ ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಾಜಿ ಗೃಹ ಕಾರ್ಯದರ್ಶಿ ಮಧುರ್ ಗುಪ್ತಾ ನೇತೃತ್ವವದಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಸಮಿತಿ ರಚಿಸಿ, ಕ್ರಮಗಳಿಗೆ ಸಲಹೆ ಕೋರಿದ್ದು, ಅದರ ಶಿಫಾರಸ್ಸುಗಳಿಗೆ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಉರಿ ಉಗ್ರ ದಾಳಿಯ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಿ ಗೃಹ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್, ಗುಜರಾತ್ ಮತ್ತು ರಾಜಸ್ಥಾನ ಗೃಹ ಸಚಿವರಾದ ಪ್ರದೀಪ್ಸಿಂಗ್ ಜಡೇಜಾ ಹಾಗೂ ಗುಲಾಬ್ ಚಂದ್ ಕಟಾರಿಯಾ, ಜಮ್ಮು ಮತ್ತು ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬ್ರಿಜ್ ರಾಜ್ ಶರ್ಮಾ ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.