ಉತ್ತರಾಖಂಡ : ಗಂಗಾನದಿಯನ್ನು ಶುದ್ಧಿಗೊಳಿಸುವ ಅಂಗವಾಗಿ ಉತ್ತರಾಖಂಡದ ರಾಜ್ಯದ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಋಷಿಕೇಶದಲ್ಲಿ 500 ಎಕರೆ ಭೂ ಪ್ರದೇಶವನ್ನು ಆಮೆಗಳ ಸಂರಕ್ಷಣಾ ವಲಯ ಸ್ಥಾಪನೆಗೆ ನೀಡಿದ್ದಾರೆ.
ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆಯಡಿ ಜಲಚರಗಳ ಧಾಮವನ್ನು ಸ್ಥಾಪಿಸುವ ಸಲುವಾಗಿ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ.
ಆಮೆಯಂತಹ ಜಲಚರಗಳು ನದಿಯ ಶುದ್ಧೀಕರಣದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಅಲ್ಲದೆ ಸ್ಮಶಾನವನ್ನು ದೂರ ಇಡುವ ಸಲುವಾಗಿ 400 ಚಿತಾಗಾರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿ ನೀರಿನ ಶುದ್ಧಿಯಲ್ಲಿ ಮೀನು, ಆಮೆ ಮತ್ತು ಮೊಸಳೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನದಿ ಮಾಲಿನ್ಯವನ್ನು ದೂರವಿಡುವ ಸಾಮರ್ಥ್ಯ ಈ ಜಲಚರಗಳಿಗಿವೆ.
ಹೀಗಾಗಿ ಆಮೆ ಸಂರಕ್ಷಣಾ ಧಾಮ, ತಳಿ ವೃದ್ಧಿಗೆ ವಲಯಗಳನ್ನು ಸ್ಥಾಪಿಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.