ಮಲೆಗಾಂವ್ : 2002 ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ರಾನ್ ಬಟುಕ್ನನ್ನು ಪೊಲೀಸರು ಬಂಧಿಸಿದ್ದಾರೆ.
2002 ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ರಾನ್ ಬಟುಕ್ ಅಲಿಯಾಸ್ ಶೇರುನನ್ನು ಇಂದು ಎಟಿಎಸ್ ಮತ್ತು ಅಹ್ಮದಾಬಾದ್ನ ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದ ಮಲೆಗಾಂವ್ನಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.
ಇಮ್ರಾನ್ ಬಟುಕ್ ಗೋದ್ರಾ ರೈಲ್ವೆ ನಿಲ್ದಾಣದಲ್ಲಿ ಸಾಬರ್ಮತಿ ಎಕ್ಸ್ಪ್ರೆಸ್ ರೈಲಿನ S6 ಬೋಗಿಗೆ ಬೆಂಕಿ ಹಚ್ಚಿದ್ದ. ಇದರಿಂದಾಗಿ ರೈಲಿನಲ್ಲಿದ್ದ 59 ಮಂದಿ ಜೀವಂತವಾಗಿ ದಹನವಾಗಿದ್ದರು. ರೈಲಿಗೆ ಬೆಂಕಿ ಹಚ್ಚಿದವರ ಗುಂಪಿನಲ್ಲಿ ಇಮ್ರಾನ್ ಬಟುಕ್ನ ಹೆಸರನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿದ ವಿಶೇಷ ತನಿಖಾ ತಂಡ ಎರಡನೇ ಚಾರ್ಜ್ಶೀಟ್ನಲ್ಲಿ ನಮೂದಿಸಿತ್ತು.
2011 ರಲ್ಲಿ 31 ಜನರನ್ನು ಆರೋಪಿಗಳೆಂದು ಘೋಷಿಸಿ, 63 ಜನರ ಮೇಲಿನ ಆರೋಪವನ್ನು ಖುಲಾಸೆಗೊಳಿಸಲಾಗಿತ್ತು. ತದನಂತರ 11 ಜನರಿಗೆ ಮರಣದಂಡನೆ ನೀಡಿ ಉಳಿದವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು.
2002 ರ ಫೆಬ್ರವರಿ 27 ರಂದು ಗೋದ್ರಾ ರೈಲು ನಿಲ್ದಾಣದ ಬಳಿ ಸಾಬರ್ಮತಿ ಎಕ್ಸ್ಪ್ರೆಸ್ ರೈಲಿಗೆ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿದ್ದರ ಪರಿಣಾಮ 59 ಜನರು ಸಜೀವವಾಗಿ ದಹನಗೊಂಡಿದ್ದರು. ಈ ಪ್ರಕರಣ ನಂತರ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಯಾಗಲು ಕಾರಣವಾಗಿ ಸುಮಾರು 1000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಈ ಹಿಂದೆ ಗೋದ್ರಾ ಪ್ರಕರಣದ ಪ್ರಮುಖ ಆರೋಪಿ ಫರೂಕ್ ಭನಾ ಎಂಬುವನನ್ನು ಬಂಧಿಸಲಾಗಿತ್ತು. ಇದೇ ರೀತಿ ಕಾರ್ಯಾಚರಿಸಿ ಇಮ್ರಾನ್ ಬಟುಕ್ನನ್ನು ಬಂಧಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.