ನವದೆಹಲಿ: ಅತೀ ಶೀಘ್ರದಲ್ಲೇ ಭಾರತದ ವಿವಿಧ ಪ್ರವಾಸಿ ತಾಣಗಳು, ಸ್ಮಾರಕಗಳು ದಿವ್ಯಾಂಗ-ಸ್ನೇಹಿಯಾಗಲಿದ್ದು, ಅವರು ಈ ತಾಣಗಳಿಗೆ ಭೇಟಿ ನೀಡುವಂತಹ ಸೌಕರ್ಯಗಳನ್ನು ಹೊಂದಲಿವೆ.
ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯ ಮತ್ತು ದಿವ್ಯಾಂಗರ ಸಬಲೀಕರಣ ಸಚಿವಾಲಯಗಳ ಜಂಟಿ ಯೋಜನೆ ಅಡಿಯಲ್ಲಿ 50 ಪ್ರಮುಖ ಸ್ಮಾರಕಗಳು ದಿವ್ಯಾಂಗ ಸ್ನೇಹಿಯಾಗಿ ಮಾರ್ಪಟ್ಟು ಯಾವುದೇ ಸಮಸ್ಯೆಗಳಿಲ್ಲದೇ ಭೇಟಿ ನೀಡಲು ಸಾಧ್ಯವಾಗಲಿದೆ.
ಇದು ಗಾಲಿ ಕುರ್ಚಿಗಳು, ವಿಕಲಾಂಗ ಸ್ನೇಹಿ ಶೌಚಾಲಯಗಳು, ರ್ಯಾಂಪ್, ರೈಲಿಂಗ್, ಬ್ರೈಲಿ ಚಿಹ್ನೆಗಳು, ಟ್ಯಾಕ್ಟೈಲ್ ನೆಲಗಳು ಮುಂತಾದ ಸೌಲಭ್ಯಗಳನ್ನು ಹೊಂದಲಿವೆ.
ವಿಕಲಾಂಗ ಜನರ ಸಬಲೀಕರಣ ಇಲಾಖೆ ಹಾಗೂ ಭಾರತದ ಪುರಾತತ್ವ ಸಂಸ್ಥೆ (ಎಎಸ್ಐ) ಜಂಟಿ ಸಹಯೋಗದೊಂದಿಗೆ ಈ ಯೋಜನೆ ಆರಂಭಿಸಲಾಗಿದ್ದು, ತಾಜ್ ಮಹಲ್, ಕೆಂಪು ಕೋಟೆ, ಕೋನಾರ್ಕ್ ದೇವಾಲಯ, ಪುರಿ ಜಗನ್ನಾಥ್ ದೇವಾಲಯ ಮುಂತಾದ ಸ್ಮಾರಕಗಳು ದಿವ್ಯಾಂಗ ಸ್ನೇಹಿಯಾಗಲಿವೆ.
ಭಾರತದ ಪುರಾತತ್ವ ಸಂಸ್ಥೆ (ಎಎಸ್ಐ) ಕಳೆದ ಹಲವು ವರ್ಷಗಳಿಂದ ತಾಜ್ ಮಹಲ್, ಅಜಂತಾ ಎಲ್ಲೋರಾ ಗುಹೆಗಳು, ಫತೇಪುರ್ ಸಿಕ್ರಿ, ಅಗಾ ಖಾನ್ ಅರಮನೆ, ಟಿಪ್ಪು ಸುಲ್ತಾನ್ ಅರಮನೆಗಳಲ್ಲಿ ಇದರ ಕಾರ್ಯ ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.