ನವದೆಹಲಿ: ದೇಶದ್ರೋಹದ ಆರೋಪ ಹೊತ್ತು ಜೈಲು ಸೇರಿ ಈಗ ಬಿಡುಗಡೆಗೊಂಡಿರುವ ಜೆಎನ್ಯು ವಿದ್ಯಾರ್ಥಿಯನ್ನು ಹೀರೋ ಆಗಿ ಮೆರೆಸಲು ಕೆಲವರು ತುದಿಗಾಲಲ್ಲಿ ನಿಂತಿರುವ ಈ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಸಹೋದರ ಮೊಮ್ಮಗ ದಿಟ್ಟ ಹೇಳಿಕೆಯನ್ನು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಪಂಡಿತ್ ಸುಜಿತ್ ಆಜಾದ್, ಈ ದೇಶಕ್ಕೆ ಅಗೌರವ ತೋರಿಸುವವರ ತಲೆ ಕಡಿಯುತ್ತೇನೆ ಎಂದಿದ್ದಾರೆ.
’ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಈ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದ್ದಾರೆ, ಅವರು ಮತ್ತು ಅವರ ಸಹೋದರರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ. ಅವರ ತ್ಯಾಗ ನಿರರ್ಥಕವಾಗಲು ನಾವು ಬಿಡಬೇಕೇ? ದೇಶದ್ರೋಹದ ಕಾರ್ಯ ಮಾಡುವವರ ಮತ್ತು ದೇಶಕ್ಕೆ ಅಗೌರವ ತೋರಿಸುವವರ ತಲೆ ಕಡಿಯಬೇಕು’ ಎಂದಿದ್ದಾರೆ.
‘ನನ್ನ ತಲೆ ತುಂಡಾದರು ಪರವಾಗಿಲ್ಲ, ತಾಯಿ ಭಾರತೀಯ ಶತ್ರುಗಳ ಮುಂದೆ ತಲೆ ತಗ್ಗಿಸಲ್ಲ’ ಎಂದಿದ್ದಾರೆ.
ಸುಜಿತ್ ಮತ್ತು ಭಗತ್ ಸಿಂಗ್ ಬ್ರಿಗೇಡ್ ಅವರು ಜೆಎನ್ಯುನ ಆಡಳಿತಾತ್ಮಕ ಆವರಣದಲ್ಲಿ ರಾಷ್ಟ್ರಧ್ವಜವನ್ನೂ ಹಾರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.