ಮಂಗಳೂರು : ಇತ್ತೀಚಿನ ದಿನಗಳಲ್ಲಿ ಹಲವು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತಿದ್ದು, ರಕ್ತದಾನಿಗಳ ಅವಶ್ಯಕತೆ ಇದೆ. ಈ ಕೊರತೆಯನ್ನು ನೀಗಿಸಲೆಂದೇ ಮಂಗಳೂರಿನ ಕೆಲವು ಉತ್ಸಾಹಿ ಯುವಕರ ತಂಡವೊಂದು ರಕ್ತದಾನಕ್ಕಾಗಿ ವಾಟ್ಸಾಪ್ ಗ್ರೂಪ್ ಪ್ರಾರಂಭಿಸಿದೆ.
ರಕ್ತದಾನ ಶ್ರೇಷ್ಠ ದಾನ. ಎಷ್ಟೋ ಜನರು ರಕ್ತದಾನ ಮಾಡಿರುವುದರ ಪರಿಣಾಮವಾಗಿ ಅನೇಕ ಜನರು ಇಂದು ನವ ಜೀವನ ಪಡೆದವರಿದ್ದಾರೆ. ಒಬ್ಬರ ರಕ್ತದಾನದಿಂದ ಅವಶ್ಯಕತೆ ಇರುವ ಕುಟುಂಬದಲ್ಲಿ ಸಂತೋಷವನ್ನು ತುಂಬುವ ಶಕ್ತಿ ರಕ್ತದಾನಿಯಾಗುವವನಿಗಿದೆ.
ಎಷ್ಟೋ ಜನರು ರಕ್ತದಾನ ಮಾಡಲು ಹೆದರುತ್ತಾರೆ, ಕೆಲವು ಉತ್ಪ್ರೇಕ್ಷೆ ಮಾಡುತ್ತಾರೆ, ಹೀಗಾಗಿ ರಕ್ತದ ಕೊರತೆ ದಿನೇ ದಿನೇ ಹೆಚ್ಚುತ್ತಿದೆ. ಅವಶ್ಯಕತೆಯಿರುವವರು ಎಷ್ಟೊಂದು ಸಲ ಪರದಾಡಬೇಕಾದ ಪರಿಸ್ಥಿತಿಯೂ ಹೆಚ್ಚಾಗುತ್ತಿದೆ. ರಕ್ತದಾನಿಗಳನ್ನು ಹುಡುಕುವುದು, ಬೇಕಾದ ಬ್ಲಡ್ಗ್ರೂಪ್ನವರನ್ನು ಕಂಡು ಹಿಡಿಯುವುದು ಇದೆಲ್ಲಾ ಆಗತ್ಯತೆಯ ಸಂದರ್ಭದಲ್ಲಿ ಕೆಲವೊಮ್ಮೆ ಸಮಸ್ಯೆಗಳಾಗಿ ಬಿಡುತ್ತವೆ. ಇಂತಹ ಸಮಸ್ಯೆಗಳನ್ನು ನೀಗಿಸಲೆಂದೇ BLOOD DONORS ಎಂಬ ವಾಟ್ಸಾಪ್ ಗ್ರೂಪ್ ಪ್ರಾರಂಭವಾಗಿದ್ದು. ಇದು ರಕ್ತದಾನಿಗಳ ಗುಂಪಾಗಿದ್ದು, ಯಾರಿಗೆ ಬೇಕಾದರೂ ರಕ್ತವನ್ನು ನೀಡುವ ಮಹತ್ತರ ಗುರಿಯನ್ನು ಹಾಕಿಕೊಂಡಿದೆ.
ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು ಹಾಗೂ ಹೆಚ್ಚೆಚ್ಚು ರಕ್ತದಾನ ಮಾಡಿ, ಅವಶ್ಯಕತೆ ಇರುವವರಿಗೆ ನೆರವಾಗಬೇಕು ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಸಮಾಜ ಸೇವೆಗೆ ಮುಂದಾಗಿರುವ ಈ ಗ್ರೂಪ್ಗೆ ಯಾರು ಬೇಕಾದರೂ ಸೇರಬಹುದು ಹಾಗೂ ಅಗತ್ಯತೆಯ ಸಂದರ್ಭಗಳಲ್ಲಿ ರಕ್ತಕ್ಕಾಗಿ ಇವರನ್ನು ಸಂಪರ್ಕಿಸಬಹುದು.
ವಾಟ್ಸಾಪ್ ಗ್ರೂಪ್ಗೆ ಸೇರಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ನಂಬರ್ಗಳನ್ನು ಸಂಪರ್ಕಿಸಬಹುದು. +919845707090 ; +966565631952 ; +966582298604 ; +966533163173 ; +966536989390 ; +91 89516 71414.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.