
ನವದೆಹಲಿ: ಜನವರಿ 16 ಮತ್ತು 17 ರಂದು ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಮೋ ಬುಕ್ ಫೆಸ್ಟ್ ಅನ್ನು ಆಯೋಜನೆಗೊಳಿಸಲಾಗಿದೆ.
ಬುಕ್ ಫೆಸ್ಟ್ ಒಂದು ಪ್ರಮುಖ ಸಾಹಿತ್ಯ ಮತ್ತು ಚಿಂತನೆಯ ಉತ್ಸವವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಜೊತೆಗೆ ಲೇಖಕರು, ರಾಜಕಾರಣಿಗಳು ಮತ್ತು ಚಿಂತಕರನ್ನು ಒಗ್ಗೂಡಿಸಿ ಪುಸ್ತಕ ಬಿಡುಗಡೆಗಳು, ಚರ್ಚೆಗಳು ಮತ್ತು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇಂದು ಈ ಕಾರ್ಯಕ್ರಮದಲ್ಲಿ ಎರಡು ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ‘ಜನರಲ್ ವಿ ಬಾನೋ’ ಮತ್ತು ‘ಮಹಾತ್ಮ’ ಎಂಬ ಶೀರ್ಷಿಕೆಯ ಪುಸ್ತಕಗಳನ್ನು ಭಾರತದ ನಮೋ ಬುಕ್ ಫೇರ್ನ ಮೊದಲ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಯಿತು.
ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಡಾ. ಸಿಂಗ್ ಅವರು ಇಂದು ಮತ್ತು ನಾಳೆ ನಡೆಯಲಿರುವ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಪುಸ್ತಕಗಳ ಸಂಗ್ರಹಿತ ಪ್ರದರ್ಶನವಿರಲಿದೆ ಮತ್ತು ವಿಚಾರ ವಿನಿಮಯಕ್ಕಾಗಿ ಲೇಖಕರು, ಚಿಂತಕರು ಮತ್ತು ಯುವಕರನ್ನು ಒಂದೇ ಸೂರಿನಡಿ ಇದು ಒಟ್ಟುಗೂಡಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


