
ಚೆನ್ನೈ: ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಮುನ್ನ ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಹೊಸ ರಾಜಕೀಯ ಬಿರುಕು ಕಾಣಿಸಿಕೊಂಡಿದ್ದು, ರಾಜ್ಯದ ಸಾಲದ ಪರಿಸ್ಥಿತಿಯ ಬಗ್ಗೆ ತೀಕ್ಷ್ಣವಾದ ವಾಗ್ವಾದಗಳು ನಡೆಯುತ್ತಿವೆ.
ಆಡಳಿತಾರೂಢ ಮೈತ್ರಿಕೂಟದಲ್ಲಿ ಈ ಭಿನ್ನಾಭಿಪ್ರಾಯ ಗಮನ ಸೆಳೆದಿದ್ದು, ಎರಡೂ ಪಕ್ಷಗಳನ್ನು ಕೆಣಕಲು ಬಿಜೆಪಿಗೆ ಅವಕಾಶ ಕಲ್ಪಿಸಿದೆ.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರವೀಣ್ ಚಕ್ರವರ್ತಿ ಅವರು ತಮಿಳುನಾಡಿನ ಸಾಲದ ಪರಿಸ್ಥಿತಿಯನ್ನು “ಆತಂಕಕಾರಿ” ಎಂದು ಕರೆದು X ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ ವಿವಾದ ಭುಗಿಲೆದ್ದಿದೆ. ಸಾಲದ ನಡುವೆಯೂ ರಾಜ್ಯವು ಡಿಎಂಕೆ ಅಡಿಯಲ್ಲಿ ಬೆಳೆದಿದೆ ಎಂಬ ಡಿಎಂಕೆ ಸಂಸದೆ ಕನಿಮೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಕ್ರವರ್ತಿ, ತಮಿಳುನಾಡನ್ನು ಉತ್ತರ ಪ್ರದೇಶದೊಂದಿಗೆ ಹೋಲಿಸಿದರು.
2010 ರಲ್ಲಿ ಉತ್ತರ ಪ್ರದೇಶವು ತಮಿಳುನಾಡಿನ ಸಾಲಕ್ಕಿಂತ ಎರಡು ಪಟ್ಟು ಹೆಚ್ಚು ಸಾಲವನ್ನು ಹೊಂದಿತ್ತು, ಆದರೆ ಈಗ ತಮಿಳುನಾಡಿನ ಸಾಲ ಹೆಚ್ಚಾಗಿದೆ ಎಂದು ಹೇಳಿದರು. ತಮಿಳುನಾಡಿನ ಬಡ್ಡಿ ಹೊರೆಯು ಪಂಜಾಬ್ ಮತ್ತು ಹರಿಯಾಣದ ನಂತರ ಮೂರನೇ ಅತಿ ಹೆಚ್ಚು ಮತ್ತು ಅದರ ಸಾಲ-ಜಿಡಿಪಿ ಅನುಪಾತವು ಕೋವಿಡ್ ಪೂರ್ವದ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದಿದ್ದಾರೆ.
ಚಕ್ರವರ್ತಿ ಅವರ ಹೇಳಿಕೆಗೆ ಡಿಎಂಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪಕ್ಷದ ವಕ್ತಾರ ಸೇಲಂ ಧರಣಿಧರನ್ ಮಾತನಾಡಿ, ಆರ್ಥಿಕ ಆರೋಗ್ಯದ ವಿಷಯದಲ್ಲಿ ತಮಿಳುನಾಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಸರಾಸರಿ ವೈಯಕ್ತಿಕ ಆದಾಯವನ್ನು ಪ್ರತಿಬಿಂಬಿಸುವ ರಾಜ್ಯದ ತಲಾ ಜಿಡಿಪಿ ತೀವ್ರವಾಗಿ ಹೆಚ್ಚಾಗಿದೆ ಮತ್ತು ಉತ್ತರ ಪ್ರದೇಶ ಮತ್ತು ರಾಷ್ಟ್ರೀಯ ಸರಾಸರಿಗಿಂತ ಬಹಳ ಮುಂದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



