
ಚಬುವಾ: ಈಶಾನ್ಯ ರಾಜ್ಯದಲ್ಲಿ ವಾಸಿಸುವ ನೆರೆಯ ದೇಶದ ಅಕ್ರಮ ವಲಸಿಗರ ಸಂಖ್ಯೆ ಇನ್ನೂ ಶೇ. 10 ರಷ್ಟು ಹೆಚ್ಚಾದರೆ ಅಸ್ಸಾಂ ಬಾಂಗ್ಲಾದೇಶಕ್ಕೆ “ಸ್ವಯಂಚಾಲಿತವಾಗಿ ಸೇರ್ಪಡೆಗೊಳ್ಳುತ್ತದೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಚ್ಚರಿಸಿದ್ದಾರೆ.
ಅಧಿಕೃತ ಕಾರ್ಯಕ್ರಮದ ನಂತರ ವರದಿಗಾರರೊಂದಿಗೆ ಮಾತನಾಡಿದ ಶರ್ಮಾ, ಕಳೆದ ಐದು ವರ್ಷಗಳಿಂದ ಈ ವಿಷಯವನ್ನು ಹೇಳುತ್ತಲೇ ಬಂದಿದ್ದೇನೆ ಎಂದಿದ್ದಾರೆ.
“ಅಸ್ಸಾಂನಲ್ಲಿ, ಜನಸಂಖ್ಯೆಯ ಶೇ. 40 ರಷ್ಟು ಜನರು ಬಾಂಗ್ಲಾದೇಶಿ ಮೂಲದವರು. ಇದು ಶೇ. 10 ರಷ್ಟು ಹೆಚ್ಚಾದರೆ, ನಾವು ಸ್ವಯಂಚಾಲಿತವಾಗಿ ಆ ದೇಶಕ್ಕೆ ಸೇರ್ಪಡೆಗೊಳ್ಳುತ್ತೇವೆ” ಎಂದಿದ್ದಾರೆ.
“ಅದಕ್ಕಾಗಿಯೇ ನಾನು ಕಳೆದ ಐದು ವರ್ಷಗಳಿಂದ ಈ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದೇನೆ” ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶದ ಹೊಸದಾಗಿ ರೂಪುಗೊಂಡ ರಾಷ್ಟ್ರೀಯ ನಾಗರಿಕ ಪಕ್ಷ (ಎನ್ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ , ಭಾರತ ನಮ್ಮ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ ಢಾಕಾ ಭಾರತದ ಈಶಾನ್ಯ ರಾಜ್ಯಗಳನ್ನು “ಪ್ರತ್ಯೇಕಿಸಬೇಕು” ಮತ್ತು ಈ ಪ್ರದೇಶದಲ್ಲಿನ ಪ್ರತ್ಯೇಕತಾವಾದಿ ಅಂಶಗಳಿಗೆ ಬೆಂಬಲ ನೀಡಬೇಕು ಎಂದಿದ್ದ.
ಈಶಾನ್ಯ ರಾಜ್ಯಗಳು ಭೌಗೋಳಿಕವಾಗಿ “ದುರ್ಬಲ”ವಾಗಿವೆ ಏಕೆಂದರೆ ಅವು ಭಾರತೀಯ ಮುಖ್ಯ ಭೂಭಾಗದ ಸಂಪರ್ಕಕ್ಕಾಗಿ ‘ಚಿಕನ್ ನೆಕ್’ ಎಂದೂ ಕರೆಯಲ್ಪಡುವ ಕಿರಿದಾದ ‘ಸಿಲಿಗುರಿ ಕಾರಿಡಾರ್’ ಅನ್ನು ಅವಲಂಬಿಸಿವೆ ಎಂದು ಅಬ್ದುಲ್ಲಾ ಹೇಳಿದ್ದ.
ಆತನ ಬೆದರಿಕೆಗಳಿಗೆ ಭಾರತ ಬಗ್ಗುವುದಿಲ್ಲವಾದರೂ ಅಕ್ರಮ ವಲಸಿಗರ ಸಂಖ್ಯೆ ಈಶಾನ್ಯ ಭಾಗದಲ್ಲಿ ಹೆಚ್ಚುತ್ತಿರುವುದು ಭಾರತಕ್ಕೆ ದೊಡ್ಡ ಮಟ್ಟದಲ್ಲೇ ಆಪಾಯವನ್ನು ತಂದೊಡ್ಡುತ್ತದೆ ಎಂಬುದರಲ್ಲಿ ಸುಳ್ಳಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



