ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಅದರ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
ಸಮಾಜವಾದಿ ಪಕ್ಷ ದಲಿತ ಸ್ಮಾರಕಗಳನ್ನು ನಿರ್ಲಕ್ಷಿಸುತ್ತಿದೆ ಮತ್ತು ರಾಜಕೀಯ ಲಾಭಕ್ಕಾಗಿ ದಲಿತ ಐಕಾನ್ಗಳನ್ನು ಮೂಲೆಗುಂಪು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಲಕ್ನೋದಲ್ಲಿ ಬಿಎಸ್ಪಿ ಸಂಸ್ಥಾಪಕ ಕಾನ್ಸಿ ರಾಮ್ ಅವರ 19 ನೇ ಪುಣ್ಯತಿಥಿಯಂದು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, “ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಸ್ಮಾರಕ ಸಂದರ್ಶಕರಿಂದ ಸಂಗ್ರಹಿಸಿದ ಟಿಕೆಟ್ ಹಣವನ್ನು ನಿರ್ವಹಣೆಗೆ ಬಳಸಬೇಕೆಂದು ವಿನಂತಿಸಿದೆ. ಈ ಹಣವನ್ನು ಬೇರೆಡೆಗೆ ತಿರುಗಿಸಲಾಗುವುದಿಲ್ಲ ನಿರ್ವಹಣೆಗೆ ಮಾತ್ರ ಬಳಸಲಾಗುವುದು ಎಂದು ಬಿಜೆಪಿ ಸರ್ಕಾರ ನಮಗೆ ಭರವಸೆ ನೀಡಿತು ಮತ್ತು ಅವರು ಹಾಗೆಯೇ ಮಾಡಿದರು. ಇದಕ್ಕಾಗಿ, ನಮ್ಮ ಪಕ್ಷವು ಅವರಿಗೆ ಕೃತಜ್ಞವಾಗಿದೆ” ಎಂದಿದ್ದಾರೆ.
ಬಿಎಸ್ಪಿ ಸರ್ಕಾರದ ಅಡಿಯಲ್ಲಿ ನಿರ್ಮಿಸಲಾದ ಸಂಸ್ಥೆಗಳು ಮತ್ತು ಸ್ಮಾರಕಗಳನ್ನು ನಿರ್ವಹಿಸಿದ್ದಕ್ಕಾಗಿ ಅವರು ಬಿಜೆಪಿಯನ್ನು ಶ್ಲಾಘಿಸಿದರು, ಅಲ್ಲದೇ ಸಮಾಜವಾದಿ ನಿರ್ವಹಣೆಗೆ ಒಂದು ರೂಪಾಯಿಯನ್ನೂ ಖರ್ಚು ಮಾಡಲಿಲ್ಲ ಮತ್ತು ಟಿಕೆಟ್ಗಳಿಂದ ಸಂಗ್ರಹಿಸಿದ ಆದಾಯವನ್ನು ತನ್ನ ಬಳಿಯೇ ಉಳಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
“ಅವರು ದಲಿತ ಐಕಾನ್ಗಳ ಸ್ಮಾರಕ ನಿರ್ವಹಣೆಗೆ ಒಂದು ರೂಪಾಯಿ ಕೂಡ ಖರ್ಚು ಮಾಡಲಿಲ್ಲ. ಟಿಕೆಟ್ಗಳಿಂದ ಸಂಗ್ರಹವಾಗುವ ಆದಾಯವನ್ನು ಸಹ ಉಳಿಸಿಕೊಂಡರು. ಆದರೆ ಈಗ ಅವರು ಅಧಿಕಾರದಿಂದ ಹೊರಗುಳಿದಾಗ, ಕಾನ್ಶಿ ರಾಮ್ ಜಿ ಅವರ ಗೌರವಾರ್ಥವಾಗಿ ಸೆಮಿನಾರ್ಗಳನ್ನು ಆಯೋಜಿಸುವುದಾಗಿ ಹೇಳುವ ಮೂಲಕ ಸುದ್ದಿಗಳಲ್ಲಿದ್ದಾರೆ” ಎಂದಿದ್ದಾರೆ.
ರಾಜಕೀಯ ಲಾಭಕ್ಕಾಗಿ ಮಾತ್ರ ದಲಿತ ಐಕಾನ್ಗಳನ್ನು ನೆನಪಿಸಿಕೊಳ್ಳುವ “ದ್ವಿಮುಖ ವ್ಯಕ್ತಿಗಳ” ಬಗ್ಗೆ ಜಾಗರೂಕರಾಗಿರಿ ಎಂದು ಅವರು ಬೆಂಬಲಿಗರಿಗೆ ಎಚ್ಚರಿಕೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.