ನವದೆಹಲಿ: ಯುವ ವ್ಯವಹಾರಗಳ ಸಚಿವಾಲಯವು ಈ ತಿಂಗಳ 18 ರಂದು ವಾರಣಾಸಿಯಲ್ಲಿ ಮೂರು ದಿನಗಳ ಯುವ ಆಧ್ಯಾತ್ಮಿಕ ಶೃಂಗಸಭೆ, “ನಶಾ ಮುಕ್ತ ಯುವ”ವನ್ನು ಆಯೋಜಿಸುತ್ತಿದೆ. ಯುವಜನರ ನೇತೃತ್ವದ ಮಾದಕ ದ್ರವ್ಯ ಮುಕ್ತ ಉಪಕ್ರಮಗಳಿಗಾಗಿ ಸಮಗ್ರ ರಾಷ್ಟ್ರೀಯ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವುದು ಶೃಂಗಸಭೆಯ ಪ್ರಾಥಮಿಕ ಗುರಿಯಾಗಿದೆ.
ನವದೆಹಲಿಯಲ್ಲಿ ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಯುವ ವ್ಯವಹಾರಗಳ ಸಚಿವ ಡಾ. ಮನ್ಸುಖ್ ಮಾಂಡವಿಯ, ದೇಶಾದ್ಯಂತ ನೂರು ಆಧ್ಯಾತ್ಮಿಕ ಸಂಸ್ಥೆಗಳಿಂದ ಸುಮಾರು 500 ಯುವ ಪ್ರತಿನಿಧಿಗಳು ಆಧ್ಯಾತ್ಮಿಕ ಶೃಂಗಸಭೆಯಲ್ಲಿ ಸೇರಲಿದ್ದಾರೆ ಎಂದು ಹೇಳಿದರು.
ಈ ಶೃಂಗಸಭೆಯು ಯುವಜನರ ನೇತೃತ್ವದ ಮಾದಕ ದ್ರವ್ಯ ಮುಕ್ತ ಆಂದೋಲನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಪ್ರತಿಪಾದಿಸಿದರು. ಸಮಾವೇಶದ ಕೊನೆಯಲ್ಲಿ, ಮಾದಕ ವ್ಯಸನವನ್ನು ಎದುರಿಸಲು ಕ್ರಿಯಾ ಯೋಜನೆಯಾದ ಕಾಶಿ ಘೋಷಣೆಗೆ ಸಹಿ ಹಾಕಲಾಗುವುದು ಎಂದು ಸಚಿವರು ಹೇಳಿದರು. ಮೂರು ದಿನಗಳ ಸಮಾವೇಶವು ಈ ತಿಂಗಳ 20 ರಂದು ಮುಕ್ತಾಯಗೊಳ್ಳಲಿದೆ.
ಹುತಾತ್ಮರನ್ನು ಗೌರವಿಸಲು ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಈ ತಿಂಗಳ 26 ರಂದು ಕಾರ್ಗಿಲ್ನಲ್ಲಿ ಮತ್ತೊಂದು ವಿಶೇಷ ಪಾದಯಾತ್ರೆಯನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಮಾಂಡವಿಯ ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.