ನವದೆಹಲಿ: ಅಮರನಾಥ ಯಾತ್ರೆಗೆ ಮುಂಚಿತವಾಗಿ ಯಾತ್ರಿಕರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಲಹೆಗಳನ್ನು ಬಿಡುಗಡೆ ಮಾಡಿದ್ದು, ಸ್ವತಂತ್ರವಾಗಿ ಪ್ರಯಾಣ ಮಾಡುವುದನ್ನು ತಪ್ಪಿಸುವಂತೆ ಕರೆ ನೀಡಿದ್ದಾರೆ. ಇಂದು ಉಧಂಪುರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ನಡೆದಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಯಾತ್ರೆಗೆ ಮತ್ತಷ್ಟು ಬಿಗಿ ಭದ್ರತೆ ನೀಡುತ್ತಿವೆ.
ಉಧಂಪುರದಲ್ಲಿ ಎನ್ಕೌಂಟರ್ ಸಂಭವಿಸುವ ಗಂಟೆಗಳ ಮೊದಲು ಸಲಹೆ ಬಿಡುಗಡೆ ಮಾಡಲಾಗಿದ್ದು, ಒಬ್ಬೊಬ್ಬರೆ ಪ್ರಯಾಣವನ್ನು ತಪ್ಪಿಸಿ, ಬೆಂಗಾವಲು ಪಡೆಯಲ್ಲಿಯೇ ಪ್ರಯಾಣಿಸಿ ಎಂದು ಯಾತ್ರಿಕರಿಗೆ ಸೂಚನೆ ನೀಡಲಾಗಿದೆ.
ಆಪರೇಷನ್ ಬಿಹಾಲಿ ಹೆಸರಿನ ಸೇನಾ-ಪೊಲೀಸ್ ಜಂಟಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಈ ಸಲಹೆಯು ಮಹತ್ವದ್ದಾಗಿದೆ. ಉಧಂಪುರದಲ್ಲಿರುವ ಬಸಂತ್ಗಢದ ಕುರು ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರೊಂದಿಗೆ ಎನ್ಕೌಂಟರ್ನಲ್ಲಿ ತೊಡಗಿವೆ.
3,880 ಮೀಟರ್ ಎತ್ತರದ ಪವಿತ್ರ ಗುಹಾ ದೇವಾಲಯ ಅಮರನಾಥಕ್ಕೆ 38 ದಿನಗಳ ಕಾಲ ನಡೆಯುವ ಯಾತ್ರೆ ಜುಲೈ 3 ರಂದು ಪ್ರಾರಂಭವಾಗಿ ಆಗಸ್ಟ್ 9 ರಂದು ಕೊನೆಗೊಳ್ಳಲಿದೆ.
ಹಲವಾರು ಭಕ್ತರು ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಯಾತ್ರೆ ಪ್ರಾರಂಭವಾಗುವ ಒಂದು ದಿನ ಮೊದಲು ಜಮ್ಮು ಮೂಲದ ಭಗವತಿ ನಗರ ಮೂಲ ಶಿಬಿರದಿಂದ ಯಾತ್ರಾರ್ಥಿಗಳ ಮೊದಲ ತಂಡ ಕಾಶ್ಮೀರಕ್ಕೆ ಹೊರಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.