ಪ್ರಯಾಗ್ರಾಜ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ 68 ಹಿಂದೂ ಭಕ್ತರ ಗುಂಪು ಗುರುವಾರ ಪ್ರಯಾಗ್ರಾಜ್ಗೆ ಆಗಮಿಸಿ, ತಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದೆ.
ಯುಪಿ ಮಾಹಿತಿ ಇಲಾಖೆಯ ಪ್ರಕಾರ, ಭಕ್ತರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿಯ ಪವಿತ್ರ ಸಂಗಮದಲ್ಲಿ ತಮ್ಮ ಪೂರ್ವಜರಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗುಂಪಿನೊಂದಿಗೆ ಬಂದ ಮಹಾಂತ ರಾಮನಾಥ್, ಮಹಾಕುಂಭಕ್ಕೆ ಬರುವ ಮೊದಲು ತಾವು ಮೊದಲು ಹರಿದ್ವಾರಕ್ಕೆ ಭೇಟಿ ನೀಡಿದ್ದಾಗಿ, ಅಲ್ಲಿ ಸುಮಾರು 480 ಪೂರ್ವಜರ ಚಿತಾಭಸ್ಮವನ್ನು ವಿಸರ್ಜಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿರುವುದಾಗಿ ಹೇಳಿದ್ದಾರೆ.
ಸೆಕ್ಟರ್ 9 ರಲ್ಲಿರುವ ಶ್ರೀ ಗುರು ಕಾರ್ಶ್ಣಿ ಶಿಬಿರದಲ್ಲಿ ಮಾತನಾಡಿದ ಸಿಂಧ್ ನಿವಾಸಿ ಗೋಬಿಂದ್ ರಾಮ್ ಮಖೇಜಾ, “ಕಳೆದ ಎರಡು ಅಥವಾ ಮೂರು ತಿಂಗಳುಗಳಲ್ಲಿ ಮಹಾಕುಂಭದ ಬಗ್ಗೆ ನಾವು ಕೇಳಿದಾಗಿನಿಂದ, ನಮಗೆ ಭೇಟಿ ನೀಡುವ ಆಳವಾದ ಹಂಬಲವಿತ್ತು. ಹೀಗಾಗಿ ನಾವು ಇಲ್ಲಿಗೆ ಬರುವುದನ್ನು ತಡೆಯಲಾಗಲಿಲ್ಲ” ಎಂದರು.
“ಕಳೆದ ಏಪ್ರಿಲ್ನಲ್ಲಿ ಪಾಕಿಸ್ಥಾನದಿಂದ 250 ಜನರು ಪ್ರಯಾಗರಾಜ್ಗೆ ಭೇಟಿ ನೀಡಿ ಗಂಗಾ ಸ್ನಾನ ಮಾಡಿದ್ದರು. ಈ ಬಾರಿ, ಸಿಂಧ್ನ ಆರು ಜಿಲ್ಲೆಗಳಾದ “ಘೋಟ್ಕಿ, ಸುಕ್ಕೂರ್, ಖೈರ್ಪುರ್, ಶಿಕಾರ್ಪುರ್, ಕಾರ್ಕೋಟ್ ಮತ್ತು ಜಟಾಬಲ್” ನಿಂದ 68 ಜನರು ಬಂದಿದ್ದಾರೆ, ಅವರಲ್ಲಿ ಸುಮಾರು 50 ಜನರು ಮೊದಲ ಬಾರಿಗೆ ಭೇಟಿ ನೀಡುತ್ತಾರೆ” ಎಂದು ಅವರು ಹೇಳಿದರು.
“ಇದು ಸಂತೋಷದಾಯಕ, ಅಗಾಧವಾದ ಭಾವನೆ. ಅದನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ. ನಾಳೆ, ನಾವು ಮತ್ತೊಂದು ಪವಿತ್ರ ಸ್ನಾನ ಮಾಡುತ್ತೇವೆ. ಇಲ್ಲಿರುವುದರಿಂದ ನಮ್ಮ ಸನಾತನ ಧರ್ಮ ಪರಂಪರೆಯ ಬಗ್ಗೆ ನಮಗೆ ಹೆಮ್ಮೆಯಾಗುತ್ತದೆ” ಎಂದು ಹೇಳಿದರು. ಘೋಟ್ಕಿಯ 11 ನೇ ತರಗತಿಯ ವಿದ್ಯಾರ್ಥಿನಿ ಸುರ್ಭಿ, ಭಾರತದಲ್ಲಿ ಮತ್ತು ಮಹಾ ಕುಂಭದಲ್ಲಿ ಇದು ತನ್ನ ಮೊದಲ ಅನುಭವ ಎಂದು ಹೇಳಿದರು.
“ಮೊದಲ ಬಾರಿಗೆ, ನಾನು ನನ್ನ ಧರ್ಮವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ವೀಕ್ಷಿಸಲು ಸಾಧ್ಯವಾಗುತ್ತಿದೆ. ಇದು ಅದ್ಭುತವೆನಿಸುತ್ತದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.