ನವದೆಹಲಿ: ಬಿಳಿ ಸೀರೆ ಧರಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ತಮ್ಮ ಸತತ ಎಂಟನೇ ಬಜೆಟ್ ಭಾಷಣಕ್ಕೂ ಮುನ್ನ ‘ಬಹಿ ಖಾತಾ’ ದಲ್ಲಿನ ಟ್ಯಾಬ್ಲೆಟ್ನೊಂದಿಗೆ ಸಚಿವಾಲಯದ ಹೊರಗೆ ಸುದ್ದಿಗಾರರಿಗೆ ಪೋಸ್ ನೀಡಿದರು. ನಂತರ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು ಮತ್ತು ಬಜೆಟ್ ಮಂಡನೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ಹಲವು ದಶಕಗಳ ಕಾಲ ಹಣಕಾಸು ಸಚಿವರು ಬಜೆಟ್ ದಿನದಂದು ಸಂಸತ್ತಿಗೆ ಬ್ರೀಫ್ಕೇಸ್ಗಳನ್ನು ಒಯ್ಯುವ ಸಂಪ್ರದಾಯವಿತ್ತು, ಶ್ರೀಮತಿ ಸೀತಾರಾಮನ್ 2019 ರಲ್ಲಿ ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಬಹಿ ಖಾತಾದಲ್ಲಿ ಬಜೆಟ್ ದಾಖಲೆ ಕೊಂಡೊಯ್ಯುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಈ ಮೂಲಕ ಬಜೆಟ್ಗೆ ಭಾರತೀಯ ಸ್ಪರ್ಶವನ್ನು ನೀಡಿದರು. ಎರಡು ವರ್ಷಗಳ ನಂತರ, 2021 ರಲ್ಲಿ, ಅವರು ‘ಬಹಿ ಖಾತಾ’ ದಲ್ಲಿ ಸುತ್ತಿದ ಟ್ಯಾಬ್ಲೆಟ್ ಅನ್ನು ಹೊತ್ತುಕೊಂಡು ಕಾಗದರಹಿತ ಬಜೆಟ್ ಮಂಡನೆಯನ್ನು ಆರಂಭಿಸಿದರು.
ಇಂದು ಸೀತಾರಾಮನ್ ಅವರು ಸತತ ಎಂಟನೇ ಬಜೆಟ್ ಮಂಡಿಸುತ್ತಿದ್ದಾರೆ. ದಿವಂಗತ ಮೊರಾರ್ಜಿ ದೇಸಾಯಿ ಅವರು ಗರಿಷ್ಠ ಹತ್ತು ಬಜೆಟ್ ಭಾಷಣಗಳನ್ನು ಮಾಡಿದ ದಾಖಲೆಯನ್ನು ಹೊಂದಿದ್ದಾರೆ, ಆದರೆ ಅವು ಸತತವಾಗಿರಲಿಲ್ಲ. ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಒಂಬತ್ತು ಬಜೆಟ್ಗಳನ್ನು ಮಂಡಿಸಿದ್ದಾರೆ.
ವಿಶೇಷ ದಿನದಂದು, ಶ್ರೀಮತಿ ಸೀತಾರಾಮನ್ ಮಧುಬನಿ ಕಲೆಗೆ ಗೌರವವಾಗಿ ಸೀರೆಯನ್ನು ಧರಿಸಿದ್ದಾರೆ. 2021 ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರು ಹಣಕಾಸು ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ದುಲಾರಿ ದೇವಿ ಅವರು ಬಜೆಟ್ ದಿನದಂದು ಆ ಸೀರೆಯನ್ನು ಧರಿಸುವಂತೆ ವಿನಂತಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.