ನವದೆಹಲಿ: ಭಾರತೀಯ ಪ್ರಜಾಪ್ರಭುತ್ವದ ವೈಶಾಲ್ಯತೆಯು ಗುರುಗಳ ಬೋಧನೆಗಳು, ಸಾಹಿಬ್ಜಾದಾಗಳ ತ್ಯಾಗ ಮತ್ತು ದೇಶದ ಏಕತೆಯ ಮೂಲ ಮಂತ್ರವನ್ನು ಆಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ನವದೆಹಲಿ ಭಾರತ ಮಂಟಪದಲ್ಲಿ ವೀರ ಬಾಲ ದಿವಸವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರು ಪರಂಪರೆಯು ಎಲ್ಲರನ್ನು ಸಮಾನ ಗೌರವದಿಂದ ಕಾಣುವುದನ್ನು ಕಲಿಸಿದೆ ಮತ್ತು ಸಂವಿಧಾನವೂ ನಮಗೆ ಅದೇ ಚಿಂತನೆಯನ್ನು ಪ್ರೇರೇಪಿಸುತ್ತದೆ. ದೇಶದ ಸಮಗ್ರತೆ ಮತ್ತು ಆಲೋಚನೆಗಳೊಂದಿಗೆ ರಾಜಿ ಮಾಡಿಕೊಳ್ಳದಂತೆ ಧೈರ್ಯಶಾಲಿ ಸಾಹಿಬ್ಜಾದಾಸ್ ಅವರ ಜೀವನ ಜನರಿಗೆ ಕಲಿಸುತ್ತದೆ ಎಂದು ಮೋದಿ ಹೇಳಿದರು.
ಸಂವಿಧಾನವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಪ್ರಧಾನವಾಗಿ ಇಟ್ಟುಕೊಳ್ಳುವ ತತ್ವವನ್ನು ಸಹ ಜನರಿಗೆ ನೀಡುತ್ತದೆ ಎಂದು ಅವರು ಹೇಳಿದರು. ಸಾಹಿಬ್ಜಾದೆ ಜೋರಾವರ್ ಸಿಂಗ್ ಮತ್ತು ಸಾಹಿಬ್ಜಾದಾ ಫತೇ ಸಿಂಗ್ ತುಂಬಾ ಚಿಕ್ಕವರಾಗಿದ್ದರು, ಆದರೆ ಅವರ ಧೈರ್ಯವು ಆಕಾಶಕ್ಕಿಂತ ಹೆಚ್ಚಾಗಿತ್ತು . ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ದೇಶ ಮತ್ತು ಅದರ ಹಿತಾಸಕ್ತಿಗಳಿಗಿಂತ ಯಾವುದೂ ದೊಡ್ಡದಲ್ಲ ಎಂಬುದನ್ನು ಈ ವೀರ್ ಬಾಲ್ ದಿವಸ್ ದಿನ ಕಲಿಸುತ್ತದೆ ಎಂದರು.
ಇತಿಹಾಸದಿಂದ ಇಂದಿನವರೆಗೆ, ಯುವ ಶಕ್ತಿಯು ಯಾವಾಗಲೂ ಭಾರತದ ಪ್ರಗತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು 21ನೇ ಶತಮಾನದ ಜನಾಂದೋಲನದವರೆಗೆ ಭಾರತದ ಯುವಕರು ಪ್ರತಿಯೊಂದು ಕ್ರಾಂತಿಗೂ ಕೊಡುಗೆ ನೀಡಿದ್ದಾರೆ ಎಂದರು.
2022 ರಲ್ಲಿ, ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್ಜಾದೆ ಅವರ ಧೈರ್ಯ ಮತ್ತು ನ್ಯಾಯಕ್ಕೆ ಗೌರವ ಸಲ್ಲಿಸಲು ಡಿಸೆಂಬರ್ 26 ರಂದು ವೀರ್ ಬಾಲ್ ದಿವಸ್ ಎಂದು ಗುರುತಿಸಲಾಗುವುದು ಎಂದು ಮೋದಿ ಘೋಷಿಸಿದರು. ಈ ದಿನವು ಯುವ ಮನಸ್ಸುಗಳನ್ನು ಪೋಷಿಸುವುದು, ಸೃಜನಶೀಲತೆಯನ್ನು ಬೆಳೆಸುವುದು ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಸ್ಪೂರ್ತಿದಾಯಕ ಕೊಡುಗೆಗಳ ಮೇಲೆ ಕೇಂದ್ರೀಕರಿಸುತ್ತದೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸುಪೋಶಿತ್ ಗ್ರಾಮ ಪಂಚಾಯತ್ ಅಭಿಯಾನಕ್ಕೆ ಚಾಲನೆ ನೀಡಿದರು. ಪೌಷ್ಟಿಕಾಂಶ-ಸಂಬಂಧಿತ ಸೇವೆಗಳ ಅನುಷ್ಠಾನವನ್ನು ಬಲಪಡಿಸುವ ಮೂಲಕ ಮತ್ತು ಸಕ್ರಿಯ ಸಮುದಾಯ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಮೂಲಕ ಪೌಷ್ಟಿಕಾಂಶದ ಫಲಿತಾಂಶಗಳು ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಇದು ಹೊಂದಿದೆ. ಸುಮಾರು ಮೂರು ಸಾವಿರದ 500 ಮಕ್ಕಳು, ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.